Site icon Vistara News

Dead Body Found | ಮಗನನ್ನು ಕಾಪಾಡಲು ಸೌಪರ್ಣಿಕಾ ನದಿಗೆ ಜಿಗಿದು ನಾಪತ್ತೆಯಾಗಿದ್ದ ಮಹಿಳೆ ಶವ ಪತ್ತೆ

Dead Body Found

ಉಡುಪಿ: ಸೌಪರ್ಣಿಕಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಮಹಿಳೆಯ ಶವ (Dead Body Found) ಸೋಮವಾರ (ಸೆ.12) ಪತ್ತೆಯಾಗಿದೆ. ಕೇರಳ ಮೂಲದ ಕುಟುಂಬದೊಂದಿಗೆ ಬಂದಿದ್ದ ಚಾಂದಿ ಶೇಖರ್ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಈ ಹಿಂದೆ ನದಿಗೆ ಬಿದ್ದದ್ದ ಮಗನನ್ನು ಕಾಪಾಡುವ ಭರದಲ್ಲಿ ಮಹಿಳೆ ನೀರು ಪಾಲಾಗಿದ್ದರು. ಸೌಪರ್ಣಿಕಾ ನದಿಯ ಮೂರುವರೆ ಕಿ.ಮೀ ದೂರದಲ್ಲಿ ಶವ ಪತ್ತೆಯಾಗಿದೆ.

ಇದನ್ನೂ ಓದಿ | Women Murder | ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ

ಸೌಪರ್ಣಿಕಾ ನದಿಯಲ್ಲಿ ನೀರಿನ ಒತ್ತಡದ ನಡುವೆಯೂ ಸಾಹಸಿಗ ಈಶ್ವರ್ ಮಲ್ಪೆ ಕಾರ್ಯಾಚರಣೆ ಮಾಡಿದ್ದಾರೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲುಗೊಂಡಿದೆ.

Exit mobile version