Site icon Vistara News

ಸಾಲಬಾಧೆ ತಾಳಲಾರದೆ ಹೊಲದಲ್ಲಿ ರೈತ ನೇಣಿಗೆ ಶರಣು

girls suicide

ಕೊಪ್ಪಳ : ಸಾಲಬಾಧೆ ತಾಳಲಾರದೆ ಹೊಲದಲ್ಲಿ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಲೂಕಿನ ಚಿಕ್ಕ ಸಿಂದೋಗಿ ಗ್ರಾಮದ ಧನಗುಂಡಯ್ಯ ನೀಲಕಂಠಯ್ಯ ಚಿಕ್ಕ ಸಿಂದೋಗಿ (48) ನೇಣಿಗೆ ಶರಣಾದ ರೈತ.

ಮೃತ ರೈತ ಎರಡು ಎಕರೆ ಜಮೀನು ಹೊಂದಿದ್ದು, ಸಾಲ ತೀರಿಸಲು ಒಂದು ಎಕರೆ ಮಾರಾಟ ಮಾಡಿ ಸಾಲ ತೀರಿಸಿದ್ದರು ಎನ್ನಲಾಗಿದೆ. ಆದರೂ ಪೂರ್ತಿ ಸಾಲ ಕಟ್ಟಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮನೆಯವರು ಮಲಗಿದ್ದ ವೇಳೆ ಹೊಲಕ್ಕೆ ತೆರಳಿ ಶನಿವಾರ (ಜು.23) ನೇಣಿಗೆ ಶರಣಾಗಿದ್ದಾರೆ. ನಿಲಂಠಯ್ಯ ಅವರಿಗೆ ಪತ್ನಿ ಇಬ್ಬರು ಪುತ್ರಿಯರಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಮಂಡ್ಯದಲ್ಲಿ ಸಾಲಬಾಧೆ ತಾಳಲಾರದೆ ರೈತನ ಆತ್ಮಹತ್ಯೆ

Exit mobile version