Site icon Vistara News

Uttara Kannada News: ಸಾವಿನ ದುಃಖದಲ್ಲೂ ನೇತ್ರದಾನ ಮಾಡಿ ಮಾನವೀಯತೆ ಮೆರೆದ ಕುಟುಂಬ

A family who donated eyes despite the grief of death showed humanity at siddapura

ಸಿದ್ದಾಪುರ: ಅಪಘಾತಕ್ಕೊಳಗಾಗಿ ಧೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಗಿನ ಜಾವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೃತನ ಕಣ್ಣುಗಳನ್ನು ದಾನ ಮಾಡುವ (Eye donation) ಮೂಲಕ ಆ ಕುಟುಂಬ (Family) ಇನ್ನೊಬ್ಬರ ಬಾಳಿಗೆ ಬೆಳಕಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಡಗದ್ದೆಯ ಪರಮೇಶ್ವರ್ ನಾಯ್ಕ (ಚಂದ್ರಘಟಗಿ) ಮೃತ ವ್ಯಕ್ತಿಯಾಗಿದ್ದಾನೆ.

ಇದನ್ನೂ ಓದಿ: Monkey death : ಕರೆಂಟ್‌ ಶಾಕ್‌ಗೆ ಬಲಿಯಾದ ಕೋತಿ; 11ನೇ ದಿನ ತಿಥಿ ಕಾರ್ಯ ನಡೆಸಿ ಕಣ್ಣೀರಿಟ್ಟ ಗ್ರಾಮಸ್ಥರು

ಜನವರಿ ತಿಂಗಳಲ್ಲಿ ಸಾಗರ ತಾಲೂಕಿನ ತಾಳಗುಪ್ಪದಲ್ಲಿ ಬೈಕ್ ಹಾಗೂ ಟ್ರಕ್ ನಡುವೆ ನಡೆದಿದ್ದ ಅಪಘಾತದಲ್ಲಿ ಬೈಕ್ ಚಲಾಯಿಸುತ್ತಿದ್ದ ಪರಮೇಶ್ವರ ತೀವ್ರ ಗಾಯಗೊಂಡಿದ್ದು, ಮಂಗಳೂರಿಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು, ಸ್ವಲ್ಪ ಚೇತರಿಸಿಕೊಂಡ ಬಳಿಕ ಸಿದ್ದಾಪುರ ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಚಿಕಿತ್ಸೆ ಫಲಿಸದೆ ಮಂಗಳವಾರ ಬೆಳಿಗಿನ ಜಾವದಲ್ಲಿ ಮೃತಪಟ್ಟಿದ್ದು ಮೃತನ ಕಣ್ಣುಗಳನ್ನು ಕುಟುಂಬದವರು ದಾನ ಮಾಡುವ ಮೂಲಕ ಸಾವಿನ ದುಃಖದಲ್ಲೂ ಮಾನವೀಯತೆ ಮೆರೆದಿದ್ದಾರೆ. ಶಿರಸಿಯ ಗಣೇಶ ನೇತ್ರಾಲಯಕ್ಕೆ ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

Exit mobile version