Site icon Vistara News

Uttara Kannada News: ಗೌಳದಡ್ಡಿಯಲ್ಲಿ ಕರಡಿ ದಾಳಿಗೆ ರೈತ ಬಲಿ

Bear attack in Gouladadi Farmer death

ಶಿರಸಿ (ಮುಂಡಗೋಡ): ಕರಡಿ ದಾಳಿಗೆ (Bear attack) ರೈತರೊಬ್ಬರು (Farmer) ಬಲಿಯಾದ ಘಟನೆಯು ಮುಂಡಗೋಡಿನ ಗೌಳದಡ್ಡಿ ಗ್ರಾಮದಲ್ಲಿ ನಡೆದಿದೆ.

ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಕರಡಿ ದಾಳಿ ಮಾಡಿದ್ದು, ಗೌಳದಡ್ಡಿ ಗ್ರಾಮದ ಜಿಮ್ಮು (58) ಎಂಬ ರೈತ ಮೃತಪಟ್ಟಿದ್ದಾರೆ.

ಮೃತ ರೈತ ಜಿಮ್ಮು ಗುರುವಾರ ಸಂಜೆ ಹೊಲದಿಂದ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ನಂತರ ತಡರಾತ್ರಿ ಅರಣ್ಯ ಪ್ರದೇಶದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಿಮ್ಮು ಅವರನ್ನು ಅರಣ್ಯ ಇಲಾಖೆ ಸಹಾಯದಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇದನ್ನೂ ಓದಿ: Viral news: ಭೂಮಿಗೆ ಇನ್ನೊಂದು ಭಾರೀ ತೂತು ಕೊರೆಯಲಿದೆ ಚೀನಾ!

ಕರಡಿ ದಾಳಿಗೆ ತಲೆ, ಕುತ್ತಿಗೆ ಹಾಗೂ ಕೈಗೆ ತೀವ್ರ ಗಾಯಗಳಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version