Site icon Vistara News

Uttara Kannada News: ಸಿದ್ದಾಪುರದಲ್ಲಿ ಗಾಳಿ-ಮಳೆ ಆರ್ಭಟಕ್ಕೆ ಮನೆ, ತೋಟಕ್ಕೆ ಹಾನಿ

House garden damaged due to wind rain storm in Siddapur

ಸಿದ್ದಾಪುರ: ತಾಲೂಕಿನಲ್ಲಿ ಆರ್ಭಟಿಸುತ್ತಿರುವ ಗಾಳಿ (Wind) ಹಾಗೂ ಮಳೆಯಿಂದಾಗಿ (Rain) ಮನೆ ಮತ್ತು ತೋಟಗಳ ಮೇಲೆ ಮರ ಬಿದ್ದು ಭಾರಿ ಹಾನಿ ಸಂಭವಿಸಿದೆ.

ಬುಧವಾರ ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಸಿದ್ದಾಪುರ ತಾಲೂಕಿನ ವಿವಿಧೆಡೆ ಮನೆಗಳ ಮೇಲೆ, ತೋಟದ ಮೇಲೆ ಮರ ಬಿದ್ದು ಲಕ್ಷಾಂತರ ರೂ. ಹಾನಿಯಾಗಿದೆ.

ಕಾನಸೂರಿನ ನಾಗರಾಜ ದುರ್ಗಪ್ಪ ನಾಯ್ಕ ಎಂಬುವರ ಮನೆಯಂಚಿಗಿರುವ ಹಿಟ್ಟಿನ ಗಿರಣಿಯ ಮೇಲೆ ಮರ ಬಿದ್ದು 10 ಸಾವಿರಕ್ಕೂ ಅಧಿಕ ನಷ್ಟವಾಗಿದೆ. ಮಾಲಾ ಕೃಷ್ಣ ಅಂಬಾಡಿ ಇವರ ಮನೆ ಮೇಲೆ ಮರ ಬಿದ್ದ ಪರಿಣಾಮ ಭಾಗಶಃ ಹಾನಿಯಾಗಿ 8 ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿದೆ.

ಇದನ್ನೂ ಓದಿ: ICC World Cup 2023: ವಿಶ್ವಕಪ್​ಗೆ ಬಾಲಿವುಡ್​ ಬಾದ್​ ಷಾ ರಾಯಭಾರಿ; ಆ ಒಂದು ‘ದಿನ’ಕ್ಕೆ ಶತಕೋಟಿ ಮಿಡಿತ

ತಾಲೂಕಿನ ಗೊದ್ಲಬೀಳು ಗ್ರಾಮದ ಸುಧಾ ಶ್ರೀಪಾದ ಹೆಗಡೆ ಎಂಬುವರ ಅಡಿಕೆ ತೋಟದ ಮೇಲೆ ಸಂಪಿಗೆ ಹಾಗೂ ಹೆಬ್ಬಲಸು ಮರ ಬಿದ್ದು ಮರಗಳು ಮುರಿದು ನಾಶವಾಗಿವೆ. ಕೋಡ್ಕಣಿ ಗ್ರಾಮದ ಜೋಗಿನಮಠದ ಮಾಣಿ ಜಟ್ಯಾ ನಾಯ್ಕ ಇವರ ವಾಸ್ತವ್ಯದ ಮನೆ ಹಿಂಬದಿಯ ಮಾಡಿನ ಮೇಲೆ ಮರ ಉರುಳಿ 10 ಸಾವಿರಕ್ಕೂ ಅಧಿಕ ನಷ್ಟವಾಗಿದೆ ಎಂದು ತಿಳಿದುಬಂದಿದೆ.

Exit mobile version