Site icon Vistara News

Uttara Kannada News: ಮೊಬೈಲ್‌ ಕಳವು ಪ್ರಕರಣ; ಅಂತರ್‌ ಜಿಲ್ಲಾ ಕಳ್ಳನ ಬಂಧನ

Uttara Kannada News Mobile Theft Case Inter district thief arrested

ಯಲ್ಲಾಪುರ: ಮೊಬೈಲ್‌ ಕಳ್ಳತನ ಪ್ರಕರಣಕ್ಕೆ (Mobile Theft Case) ಸಂಬಂಧಿಸಿದಂತೆ ಯಲ್ಲಾಪುರ ಠಾಣಾ ಪೊಲೀಸರು ಅಂತರ್‌ ಜಿಲ್ಲಾ ಕಳ್ಳನನ್ನು (Inter district thief) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅ. 4ರಂದು ಮಧ್ಯಾಹ್ನದ ವೇಳೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್‌ ಕಿತ್ತುಕೊಂಡು ಹೋದ ಕುರಿತು ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು, ತನಿಖೆ ವೇಳೆ ದೊರೆತ ಖಚಿತ ಮಾಹಿತಿಯನ್ನಾಧರಿಸಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಅರಫಾತ್‌ ಅಬ್ದುಲ ಅಜೀಮಸಾಬ ಅತ್ತಾರ್‌ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Gold Rate today: ಏರಿಳಿಕೆ ಕಾಣದ ಬಂಗಾರದ ಬೆಲೆ, 24 ಕ್ಯಾರೆಟ್‌ ಬೆಲೆ ₹ 6,016

ಆರೋಪಿಯು ಅಂತರ್‌ಜಿಲ್ಲಾ ಕಳ್ಳನಾಗಿದ್ದು, ಅಂಕೋಲಾ, ಹುಬ್ಬಳ್ಳಿ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ಪೊಲೀಸ್‌ ವ್ಯಾಪ್ತಿಯಲ್ಲಿಯೂ ಸಹ ಇದೇ ಮಾದರಿಯ ಕಳ್ಳತನ ಮಾಡಿರುವ ಕುರಿತು ಈತನ ಮೇಲೆ ಪ್ರಕರಣ ದಾಖಲಾಗಿವೆ. ವಿಚಾರಣೆಯ ವೇಳೆ ಆರೋಪಿಯು ಯಮಹಾ ಕಂಪನಿಯ ಬೈಕ್‌ನ್ನು ಸಹ ಹಾಸನ ಜಿಲ್ಲೆಯ ಹಾನಗಲ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ. ಆರೋಪಿತನಿಂದ ಕಳ್ಳತನ ಮಾಡಲಾದ 16,500 ರೂ ಮೌಲ್ಯದ ಮೊಬೈಲ್‌ ಹಾಗೂ ಕೃತ್ಯಕ್ಕೆ ಬಳಸಿದ 2.20 ಲಕ್ಷ ಮೌಲ್ಯದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: Tax refund message : ತೆರಿಗೆ ರಿಫಂಡ್‌ ಮೆಸೇಜ್‌ ಸ್ಕ್ಯಾಮ್‌ ಆಗಿರಬಹುದು, ಇರಲಿ ಎಚ್ಚರ

ಎಸ್‌ಪಿ ವಿಷ್ಣುವರ್ಧನ್‌, ಎಎಸ್‌ಪಿ ಸಿ.ಟಿ.ಜಯಕುಮಾರ, ಡಿವೈಎಸ್‌ಪಿ ಗಣೇಶ ಕೆ.ಎಲ್‌. ಮಾರ್ಗದರ್ಶನದಲ್ಲಿ, ಯಲ್ಲಾಪುರ ಸಿಪಿಐ ರಂಗನಾಥ ನೀಲಮ್ಮನವರ ಅವರ ನೇತೃತ್ವದಲ್ಲಿ ಪಿಎಸ್‌ಐ ರವಿ ಗುಡ್ಡಿ, ನಿರಂಜನ ಹೆಗಡೆ ಹಾಗೂ ಸಿಬ್ಬಂದಿಗಳಾದ ಬಸವರಾಜ, ಮಹ್ಮದ ಶಫಿ, ಧರ್ಮಾ ನಾಯ್ಕ, ಗಿರೀಶ ಲಮಾಣಿ, ಪರಶುರಾಮ ಕಾಳೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Exit mobile version