Site icon Vistara News

Uttara Kannada News: ನದಿಯಲ್ಲಿ ಮುಳುಗಿ ಯುವಕ ನಾಪತ್ತೆ; ಪತ್ತೆ ಮಾಡುವಂತೆ ಕುಟುಂಬಸ್ಥರ ಮೊರೆ

young man drowned in the river and missing at Talakadu

ಹೊನ್ನಾವರ: ತನ್ನ ಸ್ನೇಹಿತರೊಂದಿಗೆ ತಲಕಾಡು (Talakadu) ನಿಸರ್ಗಧಾಮ ಪ್ರವಾಸಕ್ಕೆ (Tour) ತೆರಳಿದ್ದ ವೇಳೆ ತಾಲೂಕಿನ ಹಡಿನಬಾಳ ಮೂಲದ ಅಮಿತ್ ಭಟ್ ನದಿಯಲ್ಲಿ (River) ಮುಳುಗಿ ನಾಪತ್ತೆಯಾಗಿದ್ದು (Missing), ಯುವಕನ (young man) ಪತ್ತೆಗೆ ನೆರವು ನೀಡುವಂತೆ ಕುಟುಂಬಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಕೊಡಗು ಜಿಲ್ಲೆಯ ತಲಕಾಡು ನಿಸರ್ಗಧಾಮಕ್ಕೆ ಅಗಸ್ಟ 15ರ ಸ್ವಾತಂತ್ರ್ಯೋತ್ಸವ ರಜಾ ದಿನದಂದು ನಾಲ್ವರು ಸ್ನೇಹಿತರೊಂದಿಗೆ ಈಜಲು ಹೋಗಿದ್ದರು. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಪಿ.ಎಲ್.ಡಿ ಬ್ಯಾಂಕ್ ಶಾಖಾ ವ್ಯವಸ್ಥಾಪಕರಾಗಿದ್ದ ಅಂಕೋಲಾ ಮೂಲದ ಮಂಡದಕೊಪ್ಪದ ವಿನೋದ ನಾಯಕ್ ಹಾಗೂ ಮಂಡ್ಯದ ಬೆಳ್ಳೂರು ಬಿಜಿಎಸ್ ಕಾಲೇಜಿನಲ್ಲಿ‌ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಹಡಿನಬಾಳದ ಅಮಿತ್ ನಾಪತ್ತೆಯಾಗಿದ್ದರು.

ವಿನೋದ ನಾಯಕ ಮೃತದೇಹ ಕಾವೇರಿ ಪುರದ ಪಂಪ್ ಬಳಿ ದೊರೆತಿದ್ದು, ಹಡಿನಬಾಳದ ಅಮಿತ್ ಮೃತದೇಹ ಇದುವರೆಗೂ ಪತ್ತೆಯಾಗಿಲ್ಲ. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎರಡು ದಿನಗಳ ಕಾಲ ಪೊಲೀಸರು ಹಾಗೂ ಅಗ್ನಿಶಾಮಕದಳದವರು ಕಾರ್ಯಚರಣೆ ನಡೆಸಿದರೂ ಪ್ರಯೋಜನವಾಗಿಲ್ಲ. ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದ್ದು, ಅಮಿತ್‌ ಮೃತದೇಹವನ್ನಾದರೂ ತರಿಸಿಕೊಡುವಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

Exit mobile version