Site icon Vistara News

Rain news | ನೆರೆಯಿಂದ ನಲುಗಿದ ಹೊನ್ನಾವರ ತಾಲೂಕಿನ ಮಾವಿನಕುರ್ವಾ

Rain news

ಕಾರವಾರ: ಜಿಲ್ಲೆಯಲ್ಲಿ ಭಾನುವಾರ ಮಳೆಯ ಅರ್ಭಟ ಸ್ವಲ್ಪ ಕಡಿಮೆಯಾಗಿದೆ. ಆದರೆ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಅನೇಕ ಗ್ರಾಮಗಳಿಗೆ ನೀರು ನುಗ್ಗಿದೆ (Rain news). ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ನದಿ ದಡಲ್ಲಿನ ಮನೆಗಳಿಗೆ, ಕೃಷಿ ಜಮೀನಿಗೆ ನೀರು ಹರಿದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಮಾವಿನಕುರ್ವಾ ಗ್ರಾಮದಲ್ಲಿ ನೆರೆಯಿಂದಾಗಿ ಕೆಲ ಗ್ರಾಮಸ್ಥರು ಊರುಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ನಾಲ್ಕೈದು ಮನೆಗಳಿಗೆ ನೀರು ನುಗ್ಗಿದ್ದು, ಮನೆಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮಾವಿನಕುರ್ವಾ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ ಜಿ ಶಂಕರ್‌ ತಿಳಿಸಿದ್ದಾರೆ.

https://vistaranews.com/wp-content/uploads/2022/07/WhatsApp-Audio-2022-07-17-at-11.43.47-AM.ogg
ಮಾವಿನಕುರ್ವಾ ಗ್ರಾಮದಲ್ಲಿ ಮಳೆಯಿಂದಾಗಿರುವ ಅನಾಹುತವನ್ನು ವಿವರಿಸಿರುವ ಗ್ರಾ.ಪಂ. ಅಧ್ಯಕ್ಷ ಜಿ ಜಿ ಶಂಕರ್‌

ಗ್ರಾಮವು ನೀರಿನಲ್ಲಿ ಮುಳುಗಿರುವುದರಿಂದ ದೋಣಿಗಳಲ್ಲಿ ಮನೆಗಳಿಗೆ ತೆರಳಿ,ಅಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸ ಮಾಡುತ್ತಿದ್ದೇವೆ. ಕೆಲವು ಮನೆಗಳು ಕುಸಿದು ಬೀಳುವ ಆತಂಕವೂ ಇದೆ. ವಿದ್ಯುತ್‌ ಕಂಬಗಳು ಉರುಳಿ ಬಿದ್ದುದ್ದರಿಂದ ಗ್ರಾಮಕ್ಕೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ ಎಂದು ಅವರು ಹೇಳಿದ್ದಾರೆ.

ಮಳೆಯ ನೀರು ತೋಟಗಳಿಗೆ ನುಗ್ಗಿರುವುದು.

ಇದನ್ನೂ ಓದಿ| Rain News | ಮಳೆಯಿಂದ ಮುಂದುವರಿದ ಹಾನಿ, ವಿವಿಧೆಡೆ ರಸ್ತೆ, ಮನೆಗಳು ಕುಸಿತ

Exit mobile version