Site icon Vistara News

Sirsi News: ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯಲ್ಲಿ ದಿಢೀರ್‌ ಕುಸಿತ; ಆತಂಕದಲ್ಲಿ ಪ್ರಯಾಣಿಕರು

#image_title

ಶಿರಸಿ: ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿ ಬಳಿ ದಿಢೀರ್ ಕುಸಿತ ಕಂಡಿದ್ದು, ಕೆಲ ಕಾಲ ಆತಂಕಕ್ಕೆ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ತ್ಯಾರ್ಸಿ (Sirsi News) ಬಳಿ ಈ ರೀತಿಯ ಘಟನೆಯು ಕಂಡುಬಂದಿದೆ.

ಸಿದ್ದಾಪುರ – ಕುಮಟಾ ರಾಜ್ಯ ಹೆದ್ದಾರಿಯು ಸದಾ ವಾಹನಗಳ ಸಂಚಾರ ಕಾಣುವಂತಹ ರಸ್ತೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಸಾಕಷ್ಟು ವಾಹನಗಳು ಸಂಚಾರ ಮಾಡುತ್ತವೆ. ಅದಲ್ಲದೆ ಭಾರಿ ವಾಹನಗಳು ಕೂಡ ಈ ರಸ್ತೆಯಲ್ಲಿ ಸಂಚರಿಸುತ್ತವೆ. ಇದೀಗ ಅದೇ ರಸ್ತೆಯಲ್ಲಿ ದಿಢೀರ್‌ ಕುಸಿತ ಕಂಡುಬಂದಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಹೆದ್ದಾರಿಯ ಮಧ್ಯದಲ್ಲಿ ಸುರಂಗದಂತೆ ಕುಸಿತ ಉಂಟಾಗಿದೆ. ಇದರಿಂದಾಗಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಕೂಡಲೇ ಅಲ್ಲಿನ ಸ್ಥಳೀಯ ಯುವಕರು ಕಲ್ಲುಗಳನ್ನು ಜೋಡಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಿಂದಾಗಿ ರಸ್ತೆ ಕಾಮಗಾರಿ ಬಗ್ಗೆ ಜನರಲ್ಲಿ ಅನುಮಾನಗಳು ವ್ಯಕ್ತವಾಗಿವೆ.

Exit mobile version