Site icon Vistara News

Sirsi News: ಬದುಕಿನಲ್ಲಿ ಹಾಸ್ಯ ಅಂತರ್ಗತ: ಪ್ರೊ. ಭುವನೇಶ್ವರಿ ಹೆಗಡೆ

M. Ramesh award ceremony in Sirsi

ಶಿರಸಿ: ಹಾಸ್ಯಕ್ಕೆ ಪಕ್ಷವಿಲ್ಲ. ಹಾಸ್ಯಕ್ಕೆ ಪಂಥವೂ ಇಲ್ಲ. ಹಾಸ್ಯ ಸಾಹಿತ್ಯ ಎಲ್ಲವನ್ನೂ ಮೀರಿದ್ದು. ಹಾಸ್ಯವು ನಮ್ಮ‌ ಬದುಕಿನಲ್ಲಿ ಅಂತರ್ಗತವಾಗಿರುತ್ತದೆ ಎಂದು‌ ಪ್ರಸಿದ್ಧ ಹಾಸ್ಯ ಸಾಹಿತಿ, ಪ್ರೊ. ಭುವನೇಶ್ವರಿ ಹೆಗಡೆ ಹೇಳಿದರು.

ನಗರದ ಗಣೇಶ‌ ನೇತ್ರಾಲಯದ ನಯನ ಸಭಾಂಗಣದಲ್ಲಿ ಭಾನುವಾರ ಎಂ.ರಮೇಶ ಪ್ರಶಸ್ತಿ‌ ಸಮಿತಿ ನೀಡುವ ಎಂ. ರಮೇಶ ಪ್ರಶಸ್ತಿ ಸ್ವೀಕರಿಸಿ ಅವರು ‌ಮಾತನಾಡಿದರು.

ಹಾಸ್ಯ‌ ಪ್ರಬಂಧವು ನಮ್ಮ ಬದುಕಿನಲ್ಲಿ ನವಿರಾದ ಪ್ರಭಾವ ಬೀರುತ್ತವೆ. ನವಿರಾದ ಹಾಸ್ಯ ಓದಿ‌ ಮುಗಿಸುವ ತನಕ ಒಂದು ಉಲ್ಲಾಸ‌ ಸಿಗಬೇಕು ಎಂದ ಅವರು, ಹಾಸ್ಯ ಸಾಹಿತ್ಯಕ್ಕೆ ಭವಿಷ್ಯವಿದೆ ಎಂದೇ ನಂಬಿದ್ದೇನೆ. ನಾನು ಹಾಸ್ಯ ಸಾಹಿತ್ಯದ ಸಂಪರ್ಕಕ್ಕೆ ಬರಲು ಪ್ರೊ. ಎಂ.ರಮೇಶ ಅವರು ಕಾರಣ. ಹಾಸ್ಯ ಸಾಹಿತ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಲು ರಮೇಶ ಅವರ ಮಾತು ಕಾರಣ. ಸತ್ಯವನ್ನು ನವಿರಾಗಿ ಹೇಳುತ್ತಿದ್ದರು ಎಂದರು.

ಇದನ್ನೂ ಓದಿ: Job Alert: ಎನ್‌ಐಸಿಎಲ್‌ನ ಆಫೀಸರ್‌ ಹುದ್ದೆಗಳಿಗೆ ಪದವೀಧರರು ಅರ್ಜಿ ಸಲ್ಲಿಸಿ

ಪ್ರಶಸ್ತಿ ಪ್ರದಾನ ನೆರವೇರಿಸಿದ ಕವಿ, ಅನುವಾದಕ ಧರಣೇಂದ್ರ ಕುರಕುರಿ, ಬದುಕನ್ನು ಗಾಢವಾಗಿ ಪ್ರೀತಿಸಿದವರು ರಮೇಶ ಅವರು. ಶಿಷ್ಯರ, ಸ್ನೇಹಿತರ ಬದುಕನ್ನು ರೂಪಿಸಿದವರರು. ಟಿ.ಸುನಂದಮ್ಮ ಅವರ ಹಾಸ್ಯ ಪರಂಪರೆಯನ್ನು ಮುಂದುವರಿಸಿದವರು ಭುವನೇಶ್ವರಿ ಹೆಗಡೆ ಅವರು. ಅವರಿಗೆ ರಮೇಶ ಅವರ ಪ್ರಶಸ್ತಿ ಲಭಿಸಿದ್ದು ಅತ್ಯಂತ‌ ಖುಷಿಯ ಸಂಗತಿ ಎಂದರು.

ನಿವೃತ್ತ ಪ್ರಾಚಾರ್ಯೆ ಕುಮುದಾ ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ವೈಶಾಲಿ ವಿ.ಪಿ.ಹೆಗಡೆ, ಪ್ರೊ.ವಿಜಯನಳಿನಿ‌ ರಮೇಶ, ಇತರರು ಇದ್ದರು. ಡಾ.ಜಿ.ಎಂ.ಹೆಗಡೆ, ಡಾ. ಶಿವರಾಮ ಕೆ.ವಿ ಅವರು ಸಭಿಕರ ಪರವಾಗಿ ಮಾತನಾಡಿದರು.

ಇದನ್ನೂ ಓದಿ: Vastu Tips: ಮನೆಯ ವಾಸ್ತು ದೋಷಗಳನ್ನು ಹೀಗೆ ಹೋಗಲಾಡಿಸಿ

ರೋಹಿಣಿ ಹೆಗಡೆ ಪ್ರಾರ್ಥಿಸಿದರು. ಮಧು ಮತ್ತೀಹಳ್ಳಿ ಸ್ವಾಗತಿಸಿದರು. ಪ್ರಜ್ಞಾ ಮತ್ತಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮ್ಮಾನ ಪತ್ರವನ್ನು ಶೈಲಜಾ ಗೋರ್ನಮನೆ ವಾಚಿಸಿದರು. ಮಹಿಮಾ ಭಟ್ಟ ವಂದಿಸಿದರು. ಕಾರ್ಯಕ್ರಮಕ್ಕೆ ನಯನ ಫೌಂಡೇಶನ್ ಸಹಭಾಗಿತ್ವ ನೀಡಿತ್ತು.

Exit mobile version