Site icon Vistara News

Veera Mahanta Shivacharya Swamiji | ದೋರನಹಳ್ಳಿಯ ಶ್ರೀ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯ

Veera Mahanta Shivacharya Swamiji

ಯಾದಗಿರಿ: ಶಹಾಪುರ ತಾಲೂಕಿನ ದೋರನಹಳ್ಳಿಯ ಹಿರೇಮಠದ ಪೀಠಾದಿಪತಿ ಷ. ಬ್ರ. ಶ್ರೀ ವೀರಮಹಾಂತ ಶಿವಾಚಾರ್ಯ ಸ್ವಾಮೀಜಿ ಅವರು (Veera Mahanta Shivacharya Swamiji) ಹೃದಯಾಘಾತದಿಂದ ಬುಧವಾರ ಲಿಂಗೈಕ್ಯರಾದರು.

ಬೆಂಗಳೂರಿನಿಂದ ಯಾದಗಿರಿಗೆ ವಾಪಸ್ ಆಗುವ ವೇಳೆ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಶ್ರೀಗಳು ಕುಸಿದುಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಳು ಲಿಂಗೈಕ್ಯರಾಗಿದ್ದಾರೆ.

ಫೆ. 25ರಂದು ಪಟ್ಟಾಧಿಕಾರ ಮಹೋತ್ಸವದ ಹಿನ್ನೆಲೆಯಲ್ಲಿ ಬಿ.ವೈ.ವಿಜಯೇಂದ್ರ ಅವರಿಗೆ ಆಹ್ವಾನ ನೀಡಲು ಶ್ರೀಗಳು ಬೆಂಗಳೂರಿಗೆ ತೆರಳಿದ್ದರು. ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ದೋರನಹಳ್ಳಿಯ ಹಿರೇಮಠದ ಬಳಿ ಭಕ್ತರ ದಂಡು ಜಮಾಯಿಸಿದೆ.

ಇದನ್ನೂ ಓದಿ | Namma metro collapse | ಮೆಟ್ರೋ ಪಿಲ್ಲರ್‌ ಕುಸಿತ: ತನಿಖೆಗಿಳಿದ ಐಐಎಸ್‌ಸಿ ತಂಡ; ತಪ್ಪಾಗಿರುವುದು ನಿಜ ಎಂದ ತಜ್ಞರು!

Exit mobile version