Site icon Vistara News

Vijayanagara News: ಕಂದಗಲ್ಲು ಗ್ರಾಮದಲ್ಲಿ ವಿಜೃಂಭಣೆಯ ಈಶ್ವರ ದೇವರ ರಥೋತ್ಸವ

eshwara devara Rathotsava in Kandagallu village, kottur

ಕೊಟ್ಟೂರು: ತಾಲೂಕಿನ ಕಂದಗಲ್ಲು ಗ್ರಾಮದ ಈಶ್ವರ ದೇವರ ಸ್ವಾಮಿಯ ರಥೋತ್ಸವವು ಸಾವಿರಾರು ಭಕ್ತಾದಿಗಳ ಹರ್ಷೋದ್ಗಾರಗಳ ನಡವೆ ವಿಜೃಂಭಣೆಯಿಂದ (Vijayanagara News) ನೆರವೇರಿತು.

ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಈಶ್ವರ ದೇವರ ಸ್ವಾಮಿಯ ಮೂರ್ತಿಗೆ, ಬೆಳಗ್ಗೆಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಭಕ್ತಾದಿಗಳು ಶ್ರೀಸ್ವಾಮಿಯ ದರ್ಶನ ಪಡೆದುಕೊಂಡರು.

ರಥೋತ್ಸವದ ಪಟಾಕಿ ಹರಾಜು ಪ್ರಕ್ರಿಯೆಯಲ್ಲಿ ಗ್ರಾಮದ ವಕೀಲ ಮಲ್ಲನಗೌಡ್ರ ಸಿದ್ದನಗೌಡ ರು 11.500 ರೂ.ಗೆ ಶ್ರೀಸ್ವಾಮಿಯ ಪಟಾಕಿಯನ್ನು ಪಡೆದುಕೊಂಡರು.

ಇದನ್ನೂ ಓದಿ: Rozgar Mela: ರೋಜಗಾರ್ ಮೇಳದಡಿ 7 ಲಕ್ಷ ಯುವಕರಿಗೆ ಉದ್ಯೋಗ; ಪ್ರಲ್ಹಾದ್‌ ಜೋಶಿ

ಪಟಾಕಿ ಸವಾಲು ಮುಗಿಯುತ್ತಿದ್ದಂತೆ ಸಾವಿರಾರು ಭಕ್ತರು ಶ್ರೀಸ್ವಾಮಿಗೆ ಉತ್ತುತ್ತಿ, ಬಾಳೆ ಹಣ್ಣು, ತೂರಿ, ಭಕ್ತಿ ಸಮರ್ಪಿಸಿ ಜಯ ಘೋಷಗಳನ್ನು ಕೂಗುತ್ತ ರಥವನ್ನು ಎಳೆದರು.

ಇದನ್ನೂ ಓದಿ: Aditya Narayan: ಕಾರ್ಯಕ್ರಮ ವೇಳೆ ಅಭಿಮಾನಿಯನ್ನು ಹೊಡೆದು ಮೊಬೈಲ್​ ಕಸಿದು ಎಸೆದ ಖ್ಯಾತ ಗಾಯಕ!

ರಥೋತ್ಸವವು ಸಮಾಳ, ಮೇಳ ಮಂಗಳವಾದ್ಯಗಳೊಂದಿಗೆ ನಂದಿಕೋಲು ಕುಣಿತದೊಂದಿಗೆ ಗ್ರಾಮದ ರಸ್ತೆಗುಂಟ ಸಾಗಿತು.

Exit mobile version