Site icon Vistara News

Vijayanagara News: ಕೂಡ್ಲಿಗಿಯ ಹುಲಿಕುಂಟೆ ಗ್ರಾಮದಲ್ಲಿ ಶ್ರೀ ಕೃಷ್ಣ ಜಯಂತಿ

Sri Krishna Jayanti celebration in Hulikunte village

ಕೂಡ್ಲಿಗಿ: ಶ್ರೀ ಕೃಷ್ಣ (Sri Krishna) ಮನುಕುಲಕ್ಕೆ ನೀಡಿದ ಸಂದೇಶಗಳನ್ನು ಪ್ರತಿಯೊಬ್ಬರೂ (Everyone) ಪಾಲಿಸುವ ಮೂಲಕ ಉತ್ತಮ ಜೀವನವನ್ನು (Good Life) ರೂಪಿಸಿಕೊಳ್ಳಬೇಕು ಎಂದು ತಾಲೂಕು ಬಿಜೆಪಿ ಒಬಿಸಿ ಯುವ ಮೋರ್ಚ ಅಧ್ಯಕ್ಷ ವಸಂತಗೌಡ ತಿಳಿಸಿದರು.

ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಶ್ರೀ ಕೃಷ್ಣ ಯಾದವ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ಗೌರವ ಸಲ್ಲಿಸಿ, ಬಳಿಕ ಅವರು ಮಾತನಾಡಿದರು.

ಇದನ್ನೂ ಓದಿ: Shreyas Iyer: ಶ್ರೇಯಸ್​ ಅಯ್ಯರ್​ ಗಾಯದ ಬಗ್ಗೆ ಬಿಸಿಸಿಐ ಬಿಗ್​ ಅಪ್​ಡೇಟ್​

ಶ್ರೀ ಕೃಷ್ಣ ಜಗತ್ತಿಗೆ ಉತ್ತಮ ಸಂದೇಶಗಳನ್ನು ನೀಡಿದ್ದು, ಶ್ರೀ ಕೃಷ್ಣನ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಕಷ್ಟಗಳು ಕಳೆದು ಹೋಗುತ್ತವೆ. ಕೃಷ್ಣನನ್ನು ನೆನೆದಾಗ ಬದುಕಿನ ಕಷ್ಟಗಳೆಲ್ಲವೂ ಮಾಯವಾಗುತ್ತವೆ. ಶ್ರೀ ಕೃಷ್ಣನು ಮಾನವರಿಗೆ ಉತ್ತಮ ಜೀವನ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Special Parliament session: ಹೊಸ ಸಂಸತ್ತಿನಲ್ಲಿ ಸಿಬ್ಬಂದಿಗೆ ಹೊಸ ʼಭಾರತೀಯʼ ಸಮವಸ್ತ್ರ; ಏನೇನು ಬದಲಾವಣೆ?

ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಯಾದವ ಯುವಕ ಸಂಘದ ಯುವ ಮುಖಂಡ ವಸಂತಗೌಡ, ವೆಂಕಟೇಶ್ ಗೌಡ, ತರೇಶಗೌಡ, ಲಕ್ಷ್ಮಣ್, ರುದ್ರಮುನಿ, ಮಂಜುನಾಥ್, ಭೀಮಣ್ಣ, ಪುರುಷೋತ್ತಮ, ಮಹೇಶ್, ಮಲ್ಲೇಶ್, ಅಂಜಿನಪ್ಪ, ಕೋಟಿ, ಗಂಗಾಧರ, ಮಲ್ಲಿ, ನಾಗೇಂದ್ರಪ್ಪ, ಸ್ವಾಮಿ, ನಾಗೇಶ್ವರ ರಾವ್, ಅಜಯ್ ಹಾಗೂ ಗ್ರಾಮದ ಮುಖಂಡರು ಮತ್ತು ಇತರರು ಉಪಸ್ಥಿತರಿದ್ದರು.

Exit mobile version