Site icon Vistara News

Uttunga cooperative society: ಉತ್ತುಂಗ ಸೌಹಾರ್ದ ಪತ್ತಿನ ಸಹಕಾರಿ ಸಂಘದಿಂದ ವಿಸ್ತಾರ ನ್ಯೂಸ್‌ ಚೇರ್ಮನ್‌, ಎಂಡಿ ಎಚ್‌.ವಿ. ಧರ್ಮೇಶ್‌ಗೆ ಸನ್ಮಾನ

Vistara News MD HV Dharmesh felicitated by Uttunga Cooperative Society

#image_title

ಬೆಂಗಳೂರು: ನಗರದ ವಿಲ್ಸನ್‌ ಗಾರ್ಡನ್‌ನ ಉತ್ತುಂಗ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ (Uttunga cooperative society) ವತಿಯಿಂದ ವಿಸ್ತಾರ ನ್ಯೂಸ್ ಚೇರ್ಮನ್‌ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಚ್‌ ವಿ ಧರ್ಮೇಶ್ ಅವರನ್ನು ಮಂಗಳವಾರ ಸನ್ಮಾನಿಸಲಾಯಿತು. ಸಂಘದಿಂದ ಪ್ರತಿವರ್ಷ ಒಬ್ಬರು ಸಾಧಕರನ್ನು ಪರಿಚಯಿಸುವ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷದ ವಾರ್ಷಿಕ ಸಭೆಗೆ ಮುಖ್ಯ ಅತಿಥಿಗಳಾಗಿ ಧರ್ಮೇಶ್ ಅವರನ್ನು ಕರೆಸಿ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಉತ್ತುಂಗ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತದ ಅಧ್ಯಕ್ಷ ವೇಣುಗೋಪಾಲ್, ಧರ್ಮೇಶ್ ಅವರು ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ವಿಸ್ತಾರ ನ್ಯೂಸ್ ಚಾನೆಲ್ ಮೂಲಕ ವಿಭಿನ್ನ ಕಾರ್ಯಕ್ರಮ ನೀಡುತ್ತಿರುವ ಇವರು‌ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಬಂದಿರುವುದು ಸಂತಸ ತಂದಿದೆ ಎಂದರು.

ಇದನ್ನೂ ಓದಿ | Technology : ತಂತ್ರಜ್ಞಾನದ ಬಳಕೆಯಿಂದ ಭಾರತ 2047ಕ್ಕೆ ಅಭಿವೃದ್ಧಿ ಹೊಂದಿದ ದೇಶ: ಪ್ರಧಾನಿ ಮೋದಿ

ವಿಸ್ತಾರ ನ್ಯೂಸ್ ಚಾನೆಲ್ ಚೇರ್ಮನ್‌ ಮತ್ತು ಎಂ.ಡಿ. ಧರ್ಮೇಶ್‌ ಮಾತನಾಡಿ, ಉತ್ತುಂಗ ಸೌಹಾರ್ದ ಪತ್ತಿನ ಸಹಕಾರ ಸಂಘದ ಕೆಲಸವು ಹೀಗೆ ಮುಂದುವರಿಯಲಿ. ನಮ್ಮಿಂದ ಎಲ್ಲ ರೀತಿಯ ಸಹಕಾರ ಸದಾ ಇರುತ್ತದೆ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉತ್ತುಂಗ ಸೌಹಾರ್ದ ಪತ್ತಿನ ಸದಸ್ಯರು, ಬಲಿಜ ಸಮುದಾಯದ ಮುಖಂಡರು ಸೇರಿ ಹಲವರು ಭಾಗಿಯಾಗಿದ್ದರು.

Exit mobile version