Site icon Vistara News

Women drowned : ಬಟ್ಟೆ ತೊಳೆಯಲು ಹೋದ ಅತ್ತೆ, ಸೊಸೆ ಕೆರೆ ಕಟ್ಟೆಯಲ್ಲಿ ನೀರಿನಲ್ಲಿ ಮುಳುಗಿ ದಾರುಣ ಸಾವು

Two persons drowned in ganga river

ತುಮಕೂರು: ಜಿಲ್ಲೆಯ ತಿಪಟೂರಿನಲ್ಲಿ ಬಟ್ಟೆ ತೊಳೆಯಲು ಕೆರೆ ಕಟ್ಟೆಗೆ ಹೋಗಿದ್ದ ಅತ್ತೆ ಮತ್ತು ಸೊಸೆ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ದಾರುಣ ಘಟನೆ ನಡೆದಿದೆ.

ತಿಪಟೂರಿನ ಮಂಜುನಾಥ ನಗರದ ಹಿಂಭಾಗದ ಕಟ್ಟೆಯಲ್ಲಿ ದುರ್ಘಟನೆ ಸಂಭವಿಸಿದ್ದು, ಅನಸೂಯಮ್ಮ (50) ಹಾಗೂ ಸೊಸೆ ಚಂದ್ರಿಕಾ (25) ಮೃತಪಟ್ಟಿದ್ದಾರೆ. ಇವರಿಬ್ಬರೂ ನೀರಿನ ಕಟ್ಟೆಗೆ ಹೋದಾಗ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಶಂಕೆ ಇದೆ. ಮಾಹಿತಿ ತಿಳಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತ ದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ತಿಪಟೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾವಣಗೆರೆ ಸಮೀಪ ಬೈಕ್‌ಗೆ ಬಸ್ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು

ದಾವಣಗೆರೆ: ತಾಲೂಕಿನ ಮದಾಪುರ ಕ್ರಾಸ್ ಬಳಿ ಬೈಕ್‌ಗೆ ಬಸ್ ಡಿಕ್ಕಿಯಾಗಿ (Road Accident) ಇಬ್ಬರು ಸವಾರರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ವಿಜಯ್ ನಾಯ್ಕ್ (30), ಪೂರ್ಯಾ ನಾಯ್ಕ್ (35) ಮೃತ ಸವಾರರು.

ಭದ್ರಾವತಿ ಕಡೆ ಹೋಗುತ್ತಿದ್ದ ಬೈಕ್ ಸವಾರರಿಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದರಿಂದ ದುರಂತ ಸಂಭವಿಸಿದೆ. ಅಪಘಾತದ ಬಳಿ ಬಸ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮೃತರು ಶಿವಮೊಗ್ಗದ ವಿನೋಭನಗರದ ನಿವಾಸಿಗಳಾಗಿದ್ದಾರೆ. ಸ್ಥಳಕ್ಕೆ ಹದಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : Children drowned : ಆಟವಾಡುತ್ತಾ ಮೀನು ಹಿಡಿಯಲು ಕಾವೇರಿ ನದಿಗೆ ಹೋದ ಇಬ್ಬರು ಮಕ್ಕಳು ನೀರುಪಾಲು

Exit mobile version