Site icon Vistara News

Domestic violence : ವಿಷ ಸೇವಿಸಿ ಮಹಿಳೆ ಸಾವು, ವರದಕ್ಷಿಣೆ ಕಿರುಕುಳ ಆರೋಪ ಮಾಡಿದ ಮನೆಯವರು

ಆತ್ಮಹತ್ಯೆ ಮಾಡಿಕೊಂಡ ಮಾಧುರಿ ಮತ್ತು ಗಂಡ ಗುರುಪ್ರಸಾದ್‌

#image_title

ಬೆಂಗಳೂರು: ವರ್ತೂರು ಠಾಣೆ ವ್ಯಾಪ್ತಿಯಲ್ಲಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ವರದಕ್ಷಿಣೆ ಕಿರುಕುಳವೇ ಕಾರಣ (Domestic violence) ಎಂದು ಆಕೆಯ ಮನೆಯವರು ಆರೋಪ ಮಾಡಿದ್ದಾರೆ.

ಮಾಧುರಿ ಅವರಿಗೆ ಈಗ ೨೦ ವರ್ಷ. ಅವರಿಗೆ 2016ರಲ್ಲಿ ಗುರುಪ್ರಸಾದ್ ಎಂಬವರ ಜತೆ ಮದುವೆಯಾಗಿತ್ತು. ಅವರು ಇತ್ತೀಚೆಗೆ ಮನೆಗೆ ತರಲಾಗಿದ್ದ ವಿಷಕಾರಿ ರಾಸಾಯನಿಕವೊಂದನ್ನು ಕುಡಿದಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾಧುರಿ ಪ್ರಾಣ ಕಳೆದುಕೊಂಡಿದ್ದಾರೆ.

ಈ ನಡುವೆ, ಇದೊಂದು ವರದಕ್ಷಿಣೆ ಹಿಂಸೆಯಿಂದ ಸಂಭವಿಸಿದ ಸಾವು. ಮದುವೆಯಾದಂದಿನಿಂದಲೇ ಹಿಂಸೆ ನೀಡಲಾಗುತ್ತಿದೆ. ವರದಕ್ಷಿಣೆ ತರುವಂತೆ ಬಲವಂತ ಮಾಡಲಾಗುತ್ತಿದೆ. ಒಮ್ಮೆ ಕೊಲೆ ಯತ್ನವೂ ನಡೆದಿತ್ತು ಎಂದು ಮಾಧುರಿ ಮನೆಯವರು ಆರೋಪ ಮಾಡಿದ್ದಾರೆ.

ಪತಿ ಗುರುಪ್ರಸಾದ್ ಮತ್ತು ಕುಟುಂಬದವರ ವಿರುದ್ಧ ಮಾಧುರಿ ಮನೆಯವರು ಆರೋಪ ಮಾಡಿದ್ದು, ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Suicide Case: ಪ್ರೀತಿಸಿದವಳು ಮೋಸದಾಟ ಆಡಿದಳೇ?; ಮನ ನೊಂದ ಹಾಸನದ ಯುವಕ ಚೆನ್ನೈನಲ್ಲಿ ನೇಣಿಗೆ ಶರಣು

Exit mobile version