Site icon Vistara News

Yallapur News | ಟಯರ್‌ಗೆ ಬೆಂಕಿ; ಹೊತ್ತಿ ಉರಿದ ಸಿಮೆಂಟ್ ಲಾರಿ, ಚಾಲಕ ಅಪಾಯದಿಂದ ಪಾರು

Truck catches fire yallapur

ಯಲ್ಲಾಪುರ: ಸಿಮೆಂಟ್ ಲಾರಿಗೆ ಬೆಂಕಿ ತಗಲಿ ರಸ್ತೆಯಲ್ಲೇ ದಹಿಸಿ ಸುಟ್ಟುಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ (Yallapur News) ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಅರೆಬೈಲ್‌ನಲ್ಲಿ ಮಂಗಳವಾರ (ಜ.೧೭) ಬೆಳಗ್ಗೆ ನಡೆದಿದೆ.

ಮಂಗಳೂರಿನಿಂದ ಬಾಗಲಕೋಟೆಗೆ ಸಿಮೆಂಟ್ ಸಾಗಿಸುತಿದ್ದ ಲಾರಿಯ ಬ್ರೇಕ್ ಲೈನರ್ ಸವೆದು ಹೀಟ್‌ನಿಂದ ಟಯರ್‌ಗೆ ಬೆಂಕಿ ತಗುಲಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾನೆ. ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿಯುವುದರೊಳಗೆ ಲಾರಿ ಸಂಪೂರ್ಣ ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Road accident | ಇಟ್ಟಿಗೆ ತುಂಬಿದ್ದ ಲಾರಿ ಪಲ್ಟಿ: ಚೆಲ್ಲಾಡಿದ ಇಟ್ಟಿಗೆಗಳ ನಡುವೆ ಕಾರ್ಮಿಕನ ಆಕ್ರಂದನ

Exit mobile version