Site icon Vistara News

ಬಿಹಾರ ಸಿಎಂ ನಿತೀಶ್​ ಕುಮಾರ್​​ಗಾಗಿ 30 ನಿಮಿಷ ನಿಲುಗಡೆಯಾದ 2 ರೈಲುಗಳು; ವಿಐಪಿ ಸಂಸ್ಕೃತಿಯ ಅತಿರೇಕ!

Nitish Kumar

JD(U) president Nitish Kumar Resigns; Good Bye To RJD, Will Take Oath As CM At 5PM Today

ಪಾಟ್ನಾ: ಪ್ರಧಾನಮಂತ್ರಿ, ಮುಖ್ಯಮಂತ್ರಿ, ಮಂತ್ರಿಗಳು ಸಾಗುವ ಮಾರ್ಗದಲ್ಲಿ ಭದ್ರತೆ ಜಾಸ್ತಿಯಿರುತ್ತದೆ. ಜನಸಾಮಾನ್ಯರ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗುತ್ತದೆ. ಇದು ವಿಐಪಿ ಸಂಸ್ಕೃತಿ..ಈ ವಿಐಪಿ ಸಂಸ್ಕೃತಿಯಿಂದ ಅದೆಷ್ಟೋ ಜನರಿಗೆ ತೊಂದರೆಯಾದ ಘಟನೆಯೂ ನಡೆದಿದೆ. ಆದರೆ ಬಿಹಾರದಲ್ಲಿ ಇನ್ನೂ ಮುಂದುವರಿದು ಮುಖ್ಯಮಂತ್ರಿ ನಿತೀಶ್​ ಕುಮಾರ್​ ಪ್ರಯಾಣಕ್ಕೆ ಅಡ್ಡಿಯಾಗಬಾರದು ಎಂದು ಎರಡು ರೈಲುಗಳ ಸಂಚಾರ ತಡೆ ಹಿಡಿದ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ಅವರ ಕಾರು ತಮ್ಮ ಬೆಂಗಾವಲು ವಾಹನಗಳೊಂದಿಗೆ ಸಾಗುತ್ತಿತ್ತು. ಈ ವೇಳೆ ಬುಕ್ಸಾರ್​ ಜಿಲ್ಲೆಯಲ್ಲಿ ಎರಡು ಪ್ರಯಾಣಿಕರ ರೈಲುಗಳನ್ನು ಸುಮಾರು 30 ನಿಮಿಷಗಳ ಕಾಲ ತಡೆ ಹಿಡಿಯಲಾಗಿತ್ತು. ಸಿಎಂ ಬೆಂಗಾವಲು ವಾಹನಗಳು ಹೋದ ಬಳಿಕವೇ ಆ ರೈಲುಗಳು ಸಂಚಾರ ಮುಂದುವರಿಸಿದವು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ರೈಲ್ವೆ ಇಲಾಖೆಗೆ ಹೇಳಿದ್ದೇನೆ ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ.

ನಿತೀಶ್​ ಕುಮಾರ್ ಅವರು ಸದ್ಯ ಸಮಾಧಾನ್​ ಯಾತ್ರೆ ನಡೆಸುತ್ತಿದ್ದಾರೆ. ಬುಕ್ಸಾರ್​​ನ ಪೊಲೀಸ್​ ಲೈನ್ಸ್​​ನಿಂದ ಗೆಸ್ಟ್​ಹೌಸ್​ಗೆ ತೆರಳುತ್ತಿದ್ದರು. ಅವರ ವಾಹನ ರೈಲ್ವೆ ಕ್ರಾಸಿಂಗ್​ ಮೂಲಕವೇ ಸಾಗಬೇಕಿತ್ತು. ನಿತೀಶ್​ ಕುಮಾರ್​ ಬೆಂಗಾವಲು ವಾಹನಗಳು ರೈಲ್ವೆ ಕ್ರಾಸಿಂಗ್​​ಗೆ ಬರುವ ವೇಳೆಯಲ್ಲೇ ಪಾಟ್ನಾ-ಬುಕ್ಸಾರ್​ ಲೋಕಲ್​ ರೈಲು ಮತ್ತು ಕಾಮಾಕ್ಯಾ ಎಕ್ಸ್​ಪ್ರೆಸ್​ ರೈಲು ಅಲ್ಲಿ ಪಾಸ್​ ಆಗಬೇಕಿತ್ತು. ಆದರೆ ಮುಖ್ಯಮಂತ್ರಿ ವಾಹನಗಳು ಹೋಗುವವರೆಗೂ ಆ ಎರಡೂ ರೈಲುಗಳನ್ನು, ಅಂದರೆ ಸುಮಾರು ಅರ್ಧಗಂಟೆ ನಿಲ್ಲಿಸಲಾಗಿದೆ. ಇದರಿಂದಾಗಿ ಹಲವು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾಗಿ ವರದಿಯಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ರಾವಣ-ಕಂಸನಿಗೂ, ನಿತೀಶ್​ ಕುಮಾರ್​ರನ್ನು ರಾಮ-ಕೃಷ್ಣನಿಗೂ ಹೋಲಿಸಿದ ಆರ್​​ಜೆಡಿ!

Exit mobile version