Site icon Vistara News

ಮದುವೆ ಮನೆಯಲ್ಲಿ ದುರಂತ; ಬಿಸಿಬಿಸಿ ರಸಂ ಇದ್ದ ಕಡಾಯಿಗೆ ಬಿದ್ದು ಮೃತಪಟ್ಟ ಬಿಸಿಎ ವಿದ್ಯಾರ್ಥಿ

21Year Old Died After fell into a cauldron of hot rasam in Tamil Nadu

#image_title

ಚೆನ್ನೈ: ಕುದಿಯುವ ನೀರು, ಸಾಂಬಾರ್​​ನಲ್ಲಿ ಬಿದ್ದು ಮಕ್ಕಳು ಮೃತಪಟ್ಟಿದ್ದು, ಇಂಥ ಕುದಿಯುವ ಪದಾರ್ಥಗಳು ಬಿದ್ದು ಗಂಭೀರವಾಗಿ ಗಾಯಗೊಂಡವರ ಬಗ್ಗೆ ನಾವು ಕೇಳಿದ್ದೇವೆ. ತಮಿಳುನಾಡಿನ (Tamil Nadu News)ತಿರುವಲ್ಲೂರ್​ ಜಿಲ್ಲೆಯಲ್ಲಿ ಇಂಥದ್ದೇ ಒಂದು ದಾರುಣ ಘಟನೆ ನಡೆದಿದೆ. 21ವರ್ಷದ ಯುವಕನೊಬ್ಬ ಬಿಸಿಬಿಸಿ ರಸಂ ಇರುವ ದೊಡ್ಡ ಕಡಾಯಿಗೆ ಬಿದ್ದು ಮೃತಪಟ್ಟಿದ್ದಾನೆ.

ಮೃತ ಯುವಕ ಕಾಲೇಜು ವಿದ್ಯಾರ್ಥಿ. ಇವನ ಹೆಸರು ಸತೀಶ್​. ಬಿಸಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದ. ಇವನು ಸಮಯ ಸಿಕ್ಕಾಗಲೆಲ್ಲ ಅಡುಗೆಗೆ ಹೋಗಿ, ಹಣ ಗಳಿಸುತ್ತಿದ್ದ. ಹಾಗೇ, ಕಳೆದ ವಾರವೂ ಕೂಡ ಅವನು ಮದುವೆಯೊಂದಕ್ಕೆ ಹೋಗಿದ್ದ. ಅಲ್ಲಿ ಬಂದ ಅತಿಥಿಗಳಿಗೆ ಊಟ ಬಡಿಸುತ್ತಿದ್ದ. ಅತಿಥಿಗಳು ಕುಳಿತು ಊಟ ಮಾಡುತ್ತಿದ್ದ ಜಾಗದಿಂದ ಸತೀಶ್​ ವೇಗವಾಗಿ ಅಡುಗೆ ಮನೆಗೆ ಹೋಗುತ್ತಿದ್ದ. ಅಲ್ಲಿ ಅಡುಗೆ ಮನೆಯಲ್ಲಿ , ಬದಿಗೆ ರಸಂನ ಕಡಾಯಿ ಇಡಲಾಗಿತ್ತು. ಆ ರಸಂ ಸಿಕ್ಕಾಪಟೆ ಬಿಸಿಯಾಗಿತ್ತು. ಹುಡುಗ ಕಾಲು ಎಡವಿ ಕಡಾಯಿಯಲ್ಲಿ ಬಿದ್ದಿದ್ದಾನೆ. ಹುಡುಗನ ಜತೆಗಿದ್ದವನು ಕೂಡಲೇ ಅವನನ್ನು ಮೇಲೆತ್ತಿದ್ದಾನೆ. ಅಷ್ಟರಲ್ಲಿ ಸತೀಶ್​ಗೆ ತೀವ್ರ ಸುಟ್ಟಗಾಯಗಳಾಗಿದ್ದವು. ಆಸ್ಪತ್ರೆಗೆ ದಾಖಲು ಮಾಡಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸದ್ಯ ಪೊಲೀಸರು ಕೇಸ್​ ದಾಖಲು ಮಾಡಿಕೊಂಡು ತನಿಖೆ ಪ್ರಾರಂಭ ಮಾಡಿದ್ದಾರೆ.

ಇದನ್ನೂ ಓದಿ: H3N2 Virus: ಎಚ್​3ಎನ್​2 ಸೋಂಕಿಗೆ ಒಳಗಾಗಿದ್ದ ಎಂಬಿಬಿಎಸ್​ ವಿದ್ಯಾರ್ಥಿ ಸಾವು; ಕೊವಿಡ್​ 19 ಕೂಡ ಬಾಧಿಸುತ್ತಿತ್ತು

ಸತೀಶ್​ನ ಪಾಲಕರು ಸಾಮಾನ್ಯ ಕೂಲಿ ಕಾರ್ಮಿಕರಾಗಿದ್ದಾರೆ. ಇದೇ ಕಾರಣಕ್ಕೆ ಸತೀಶ್​ ತನ್ನ ಖರ್ಚು ನಿಭಾಯಿಸಿಕೊಂಡು, ಓದುವ ಸಲುವಾಗಿ ಪಾರ್ಟ್​ಟೈಂ ಜಾಬ್ ಮಾಡುತ್ತಿದ್ದ. ಅಡುಗೆ ಮಾಡಿ, ಸರ್ವ್​ ಮಾಡುವ ಸಂಸ್ಥೆಯೊಂದರಲ್ಲಿ ಉದ್ಯೋಗ ಹುಡುಕಿಕೊಂಡಿದ್ದ. ಈ ಹಿಂದೆಯೂ ಹಲವು ಬಾರಿ, ವಿವಿಧ ಕಡೆಗಳಲ್ಲಿ ನಡೆದ ಮದುವೆ, ಮತ್ತಿತರ ಸಮಾರಂಭಗಳಿಗೆ ಆತ ಹೀಗೆ ಅಡುಗೆಗೆ, ಊಟ ಬಡಿಸಲು ಹೋಗಿದ್ದ.

Exit mobile version