Site icon Vistara News

ಪಿಎಫ್​ಐ ಹಿಟ್​​ಲಿಸ್ಟ್​​: ಕೇರಳ ಆರ್‌ಎಸ್‌ಎಸ್‌​ನ ಐವರು ಪ್ರಮುಖರಿಗೆ ಕೇಂದ್ರದಿಂದ ವೈ ಶ್ರೇಣಿ ಭದ್ರತೆ

BJP meeting with rss in bengaluru

ನವ ದೆಹಲಿ: ನಿಷೇಧಿತ ಪಾಪ್ಯುಲರ್​ ಫ್ರಂಟ್ ಆಫ್​ ಇಂಡಿಯಾ (ಪಿಎಫ್​ಐ) ಉಗ್ರ ಸಂಘಟನೆಯಿಂದ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕೇರಳದ ಐವರು ಆರ್​ಎಸ್​ಎಸ್​ ನಾಯಕರಿಗೆ ಕೇಂದ್ರ ಸರ್ಕಾರ ವೈ (Y)ಶ್ರೇಣಿಯ ಭದ್ರತೆಯನ್ನು ನೀಡಿದೆ. ಪಿಎಫ್​ಐ ಸಂಘಟನೆಯನ್ನು ಕಳೆದ ಮೂರು ದಿನಗಳ ಹಿಂದೆ (ಸೆ.28) ನಿಷೇಧಿಸಲಾಗಿದೆ. ಅದಕ್ಕೂ ಮೊದಲು ಸೆ.22 ಮತ್ತು 27ರಷ್ಟು ರಾಷ್ಟ್ರದ ವಿವಿಧ ರಾಜ್ಯಗಳಲ್ಲಿನ ಪಿಎಫ್​ಐ ಮುಖಂಡರ ಮನೆ, ಕಚೇರಿಗಳ ಮೇಲೆ ಎನ್​ಐಎ ದಾಳಿಯಾಗಿತ್ತು. ಪಿಎಫ್​ಐ ಉಗ್ರಕೃತ್ಯಗಳಿಗೆ ನೆರವು ನೀಡುತ್ತಿರುವುದಕ್ಕೆ ದೊಡ್ಡಮಟ್ಟದ ಸಾಕ್ಷ್ಯಗಳು ಲಭಿಸಿದ್ದವು. ಹಾಗೇ, ಪಿಎಫ್​ಐ ಸಂಘಟನೆಯ ಹಿಟ್​ಲಿಸ್ಟ್​​ನಲ್ಲಿ ದೇಶದ ಹಲವು ಪ್ರಮುಖ ನಾಯಕರ ಹೆಸರುಗಳೂ ಇರುವುದು ಬೆಳಕಿಗೆ ಬಂದಿದೆ. ಹೀಗೆ ಹಿಟ್​​ಲಿಸ್ಟ್​​ನಲ್ಲಿ ಇರುವವರಲ್ಲಿ ಆರ್​ಎಸ್​ಎಸ್​​ನ ಕೇರಳದ ಐವರು ಪ್ರಮುಖ ನಾಯಕರ ಹೆಸರುಗಳೂ ಇದ್ದು, ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ.

ಪಿಎಫ್​ಐ ಮೇಲೆ ವಿವಿಧ ಹಂತದ ರೇಡ್ ನಡೆಸಿ​, ತನಿಖೆ ಮಾಡಿದ ನಂತರ ಎನ್​ಐಎ ಮತ್ತು ಗುಪ್ತಚರದಳಗಳು ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಸಿದ್ದವು. ಹಾಗೇ, ಆಯ್ದ ಆರ್​ಎಸ್​ಎಸ್ ನಾಯಕರಿಗೂ ಭದ್ರತೆ ನೀಡಲು ಶಿಫಾರಸ್ಸು ಮಾಡಿದ್ದವು. ಅದರ ಅನ್ವಯ ಈಗ ಕೇರಳದ ಐವರು ನಾಯಕರಿಗೆ ಕೇಂದ್ರ ಸರ್ಕಾರ ಸಿಆರ್​ಪಿಎಫ್​ (CRPF) ಭದ್ರತೆ ನೀಡಲಿದೆ. ಒಬ್ಬ ನಾಯಕನ ರಕ್ಷಣೆಗೆ ಇಬ್ಬರು ಅಥವಾ ಮೂವರು ಸಿಆರ್​ಪಿಎಫ್​ ಕಮಾಂಡೋಗಳು ನಿಯೋಜನೆಗೊಳ್ಳಲಿದ್ದಾರೆ.

ಇದನ್ನೂ ಓದಿ: PFI Banned | ರಾಜ್ಯಾದ್ಯಂತ ಪಿಎಫ್‌ಐ ಕಚೇರಿಗಳಿಗೆ ಬೀಗ, ಜಿಲ್ಲೆಗಳಲ್ಲಿ ಹಲವು ನಾಯಕರಿಗಾಗಿ ಹುಡುಕಾಟ

Exit mobile version