Site icon Vistara News

ಕಂದಕಕ್ಕೆ ಬಿದ್ದ ಬಸ್​; ವೈಷ್ಣೋದೇವಿ ದೇಗುಲಕ್ಕೆ ಹೊರಟಿದ್ದ 10 ಮಂದಿ ಸಾವು, 20ಜನರಿಗೆ ಗಾಯ

A Bus Rolls Down gorge In Jammu Kashmir 10 Died 20 Injured

#image_title

ಶ್ರೀನಗರ: ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಝಜ್ಜರ್​ ಕೊಟ್ಲಿ ಸಮೀಪ ಬಸ್​ ಪಲ್ಟಿಯಾಗಿದ್ದು (Bus Fell into a Gorge), 10 ಜನರು ಮೃತಪಟ್ಟಿದ್ದಾರೆ. 20 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 75 ಪ್ರಯಾಣಿಕರನ್ನು ಹೊತ್ತ ಬಸ್​, ಪಂಜಾಬ್​ನ ಅಮೃತ್​ಸರ್​​ದಿಂದ ಕಾತ್ರಾಕ್ಕೆ ಹೋಗುತ್ತಿತ್ತು. ಕೊಟ್ಲಿ ಬಳಿ ಈ ಬಸ್​ ಕಂದಕಕ್ಕೆ ಉರುಳಿಬಿದ್ದಿದೆ. ಸೇತುವೆ ಮೇಲಿಂದ ಬಿದ್ದಿದ್ದು, ಬಸ್​ ಜಖಂ ಆಗಿದೆ. ಕಾತ್ರಾಕ್ಕೆ ಹೊರಟಿದ್ದ ಈ ಬಸ್​ನಲ್ಲಿ ಅನೇಕರು ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲಿದ್ದ ಭಕ್ತರೇ ಇದ್ದರು. ಬಹುತೇಕರು ಬಿಹಾರದವರು ಇದ್ದರು. ಆದರೆ ಕಾತ್ರಾ ಇರುವ ರಿಯಾಸಿ ಜಿಲ್ಲೆಯಿಂದ 15 ಕಿಮೀ ದೂರದಲ್ಲಿ, ಕೋಟ್ಲಿ ಬಳಿ ಅಪಘಾತಕ್ಕೀಡಾಗಿದೆ.

ಮೇ 29ರಂದು ಮೈಸೂರಿನ ಕೊಳ್ಳೇಗಾಲ-ಟಿ.ನರಸಿಪುರ ಹೆದ್ದಾರಿಯಲ್ಲಿ ಇನ್ನೋವಾ ಕಾರು ಮತ್ತು ಖಾಸಗಿ ಬಸ್ ನಡುವೆ ಅಪಘಾತವಾಗಿ ಒಂದೇ ಕುಟುಂಬದ 9 ಮಂದಿ ಮತ್ತು ಚಾಲಕ ಮೃತಪಟ್ಟಿದ್ದಾರೆ. ಮೂಲತಃ ಬಳ್ಳಾರಿಯವರಾದ ಇವರು ಪ್ರವಾಸಕ್ಕೆಂದು ಮೈಸೂರಿನ ಕಡೆಗೆ ಬಂದಿದ್ದರು. ತಮ್ಮ ಊರಿನಿಂದ ರೈಲಿನಲ್ಲಿ ಬಂದಿದ್ದವರು, ಇಲ್ಲಿ ಬಾಡಿಗೆ ಕಾರು ಮಾಡಿಸಿಕೊಂಡು ಹಲವು ಪ್ರದೇಶಗಳನ್ನು ಸುತ್ತುತ್ತಿದ್ದರು. ನಿನ್ನೆ ಅವರ ಬಾಡಿಗೆ ಕಾರು ಖಾಸಗಿ ಬಸ್​ಗೆ ಡಿಕ್ಕಿಯಾಗಿದೆ. ಅಪಘಾತದ ಭೀಕರತೆ ಅದೆಷ್ಟಿತ್ತು ಅಂದರೆ, ಕಾರಿನಲ್ಲಿ ಇದ್ದ ಹಲವರು ಜಜ್ಜಿ ಹೋಗಿದ್ದರು.

Exit mobile version