Site icon Vistara News

Madhya Pradesh: ನನ್ನ ಮಗಳ ಮದ್ವೆ, ಮಕ್ಕಳಿಗೋಸ್ಕರವಾದರೂ ಕೊಟ್ಟ ಸಾಲ ವಾಪಸ್ ಮಾಡಿ ಎಂದು ಉದ್ಯಮಿ ದಂಪತಿ ಆತ್ಮಹತ್ಯೆ

A businessman couple commits suicide to asked to return the loan given

ಭೋಪಾಲ್: ಮಧ್ಯಪ್ರದೇಶದ (Madhya Pradesh) ಪನ್ನಾದಲ್ಲಿ ಉದ್ಯಮಿಯೊಬ್ಬರು (Businessman) ತಮ್ಮ ಪತ್ನಿಗೆ ಗುಂಡು ಹಾರಿಸಿ ಕೊಂದು, ತಾವು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ದೊರೆತ ಡೆತ್‌ನೋಟ್ ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ. ಬಾಗೇಶ್ವರ ಧಾಮ್ (Bageshwar Dham) ಭಕ್ತರೂ ಆಗಿರುವ ಉದ್ಯಮಿ ಸಂಜಯ್ ಸೇಠ್ (Sanjay Seth) ಅವರು, ಡೆತ್‌ ನೋಟ್‌ನಲ್ಲಿ ತಮ್ಮ ಮಗಳ ಮದುವೆ ಕುರಿತು ಸೇರಿ ಅನೇಕ ವಿಷಯಗಳ ಬಗ್ಗೆ ತಿಳಿಸಿದ್ದಾರೆ. ಈ ಡೆತ್ ನೋಟ್ ಆಧರಿಸಿ ಮಧ್ಯಪ್ರದೇಶ ಪೊಲೀಸರು ತನಿಖೆ ನಡೆಸಿದ್ದಾರೆ.

ಗುರೂಜಿ ನನ್ನನ್ನು ಕ್ಷಮಿಸಿ. ಮತ್ತೊಂದು ಜನ್ಮ ಇದ್ದರೆ ಖಂಡಿತವಾಗಿಯೂ ನಾನು ನಿಮ್ಮ ಕಟ್ಟಾ ಭಕ್ತನಾಗಿಯೇ ಜನಿಸುವೆ ಎಂದು ಅವರು ಡೆತ್‌ನೋಟ್‌ನಲ್ಲಿ ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ, ವಿಡಿಯೋ ರೆಕಾರ್ಡ್ ಕೂಡ ಮಾಡಿದ್ದು, ಅದರಲ್ಲಿ ಅಳುತ್ತಾ ಅವರು ತಮ್ಮಿಂದ ಸಾಲ ಪಡೆದು ಹಿಂದಿರುಗಿಸದವರ ಬಗ್ಗೆ ಮಾಹಿತಿ ನೀಡಿದ್ದಾರೆ.

ದಯವಿಟ್ಟು ನನ್ನ ಮಕ್ಕಳಿಗೋಸ್ಕರ, ನನ್ನ ಮಗಳ ಮದುವೆಗಾಗಿ ನಾನು ನೀಡಿದ ಸಾಲವನ್ನು ಹಿಂದುರಿಗಿಸಿ. 50 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಮಗಳ ಮದುವೆ ವೆಚ್ಚ ಮಾಡಿ. ಮಗಳ ಖಾತೆಯಲ್ಲಿ ಹಣವಿದೆ. ಲಾಕರ್‌ನಲ್ಲಿ 29 ಲಕ್ಷ ರೂ. ಇದೆ. ನಾನು ಮತ್ತು ನನ್ನ ಹೆಂಡತಿ ದೂರ ಹೋಗುತ್ತಿದ್ದೇವೆ. ನಮಗೆ ಬದುಕಲು ಆಗುತ್ತಿಲ್ಲ. ಮಗಳಿಗಾಗಿ ಸಾಕಷ್ಟು ಆಭರಣಗಳಿವೆ. ಮಕ್ಕಳೇ ದಯವಿಟ್ಟು ನಮ್ಮನ್ನು ಕ್ಷಮಿಸಿ ಎಂದು ವಿಡಿಯೋದಲ್ಲಿ ಸಂಜಯ್ ಸೇಠ್ ಹೇಳಿದ್ದಾರೆ.

ಇದನ್ನೂ ಓದಿ: Women commits suicide : ಕೌಟುಂಬಿಕ ಕಲಹ ಹಿನ್ನೆಲೆ, 3 ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ

ಸಂಜಯ್ ಹಾಗೂ ಅವರ ಪತ್ನಿ ಮೀನು ನಗರದ ಕಿಶೋರ್‌ಗಂಜ್‌ನಲ್ಲಿ ವಾಸವಾಗಿದ್ದರು. ತಮ್ಮ ಮನೆಯ ಎರಡನೇ ಮಹಡಿಯಲ್ಲಿ ಅವರಿಬ್ಬರು ಗುಂಡ ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುಂಡಿನ ಶಬ್ದ ಕೇಳುತ್ತಿದ್ದಂತೆ ಕುಟುಂಬದ ಸದಸ್ಯರು ಅವರಿದ್ದ ಸ್ಥಳಕ್ಕೆ ಹೋಗಿದ್ದಾರೆ. ಅಷ್ಟರಲ್ಲಿ ಮೀನು ಮೃತಪಟ್ಟಿದ್ದರೆ, ಸಂಜಯ್ ಇನ್ನೂ ಉಸಿರಾಡುತ್ತಿದ್ದರು. ಆಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ.

Exit mobile version