Site icon Vistara News

ಮುಟ್ಟುಗೋಲು ಆಗಲಿದೆಯಾ ಆಮ್​ ಆದ್ಮಿ​ ಪಕ್ಷದ ಕಚೇರಿ?; 10 ದಿನದ ಗಡುವು ನೀಡಿ ನೋಟಿಸ್​ ಕೊಟ್ಟ ಡಿಐಪಿ

Death Threat To Arvind Kejriwal

ನವ ದೆಹಲಿ: ಆಮ್​ ಆದ್ಮಿ ಪಕ್ಷಕ್ಕೀಗ ಕಚೇರಿಯೇ ಮುಟ್ಟುಗೋಲಾಗುವ ಆತಂಕ ಎದುರಾಗಿದೆ. 2015-2016ನೇ ಆರ್ಥಿಕ ವರ್ಷದಲ್ಲಿ ಆಮ್​ ಆದ್ಮಿ ಪಕ್ಷವು ತನ್ನ ರಾಜಕೀಯ ಜಾಹೀರಾತನ್ನು, ಸರ್ಕಾರಿ ಜಾಹೀರಾತು ಎಂಬಂತೆ ಪ್ರಕಟಿಸಿದ್ದಕ್ಕೆ ಪ್ರತಿಯಾಗಿ 164 ಕೋಟಿ ರೂಪಾಯಿ ಪಾವತಿಸುವಂತೆ ಮಾಹಿತಿ ಮತ್ತು ಪ್ರಚಾರ ನಿರ್ದೇಶನಾಲಯ (DIP) ಆಮ್​ ಆದ್ಮಿ ಪಕ್ಷಕ್ಕೆ ವಸೂಲಾತಿ ನೋಟಿಸ್​ ನೀಡಿದೆ. ಅಷ್ಟೇ ಅಲ್ಲ, 10 ದಿನಗಳ ಒಳಗೆ ಹಣ ಪಾವತಿ ಮಾಡದೆ ಇದ್ದರೆ, ಆಪ್​ ಕಚೇರಿಯನ್ನೇ ಸೀಲ್​ ಮಾಡುವುದಾಗಿಯೂ ನೋಟಿಸ್​​ನಲ್ಲಿ ಉಲ್ಲೇಖಿಸಲಾಗಿದೆ.

ಯಾವುದೇ ಆಡಳಿತ ಪಕ್ಷ ಚುನಾವಣೆ ಸಂದರ್ಭದಲ್ಲಿ ತನ್ನ ವೈಯಕ್ತಿಕ ಲಾಭಕ್ಕಾಗಿ ಜಾಹೀರಾತುಗಳನ್ನು ಪ್ರಕಟಿಸಲು ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್​ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆದರೆ ಆಪ್​ ಪಕ್ಷ 2015-2016ರಲ್ಲಿ ಜಾಹೀರಾತು ಪ್ರಕಟಿಸುವಾಗ ಎಲ್ಲ ನಿಯಮಗಳನ್ನೂ ಉಲ್ಲಂಘಿಸಿದೆ. ಸರ್ಕಾರಿ ಹಣ ದುರ್ಬಳಕೆ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಅಜಯ್​ ಮಾಕನ್​ ಆರೋಪಿಸಿದ್ದರು. ಅದರಂತೆ ಸುಪ್ರೀಂಕೋರ್ಟ್​ ಮಾರ್ಗಸೂಚಿಗಳಿಗೆ ವಿರುದ್ಧವಾಗಿ, ಖರ್ಚು ಮಾಡಿದ ಮೊತ್ತವನ್ನು ಆಪ್​​ನಿಂದ ಮರುಪಡೆಯಲು 3 ಸದಸ್ಯರ ಒಂದು ಸಮಿತಿಯನ್ನೂ ರಚಿಸಲಾಗಿತ್ತು.

ಕಳೆದ ಒಂದು ತಿಂಗಳ ಹಿಂದೆ ಲೆಫ್ಟಿನೆಂಟ್ ಗವರ್ನರ್​ ವಿ.ಕೆ.ಸಕ್ಸೇನಾ ಅವರೂ ಇದೇ ವಿಷಯವನ್ನು ಹೇಳಿದ್ದರು. ಜಾಹೀರಾತಿನ ಹೆಸರಲ್ಲಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿರುವ ಆಪ್​ನಿಂದ 97 ಕೋಟಿ ರೂಪಾಯಿ ವಸೂಲಿ ಮಾಡುವಂತೆ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದರು. ಅದರ ಬೆನ್ನಲ್ಲೇ ಡಿಐಪಿ ನೋಟಿಸ್ ಹೋಗಿದೆ. ಡಿಐಪಿ ಬಡ್ಡಿಯ ಹಣವನ್ನೂ ಸೇರಿಸಿ, ನೋಟಿಸ್​ನಲ್ಲಿ ಉಲ್ಲೇಖಿಸಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ಚಂದ್ರುಗೆ ಆಮ್‌ ಆದ್ಮಿ ಪಕ್ಷದ ರಾಜ್ಯಮಟ್ಟದ ಹೊಣೆಗಾರಿಕೆ

Exit mobile version