Site icon Vistara News

Atiq Ahmed: ಅತೀಕ್​ ಅಹ್ಮದ್​ ಕುಟುಂಬದಲ್ಲಿ ಎಲ್ಲರೂ ಕ್ರಿಮಿನಲ್​ಗಳೇ; ಮರಣದಂಡನೆಗೆ ಉಮೇಶ್ ಪಾಲ್ ತಾಯಿಯಿಂದ ಆಗ್ರಹ

Atiq Ahmed Shot Dead:Know about gangster atiq ahmed and his family's criminal background

Atiq Ahmed Shot Dead:Know about gangster atiq ahmed and his family's criminal background

ಲಖನೌ: 2005ರಲ್ಲಿ ಬಹುಜನ ಸಮಾಜ ಪಾರ್ಟಿಯ ಶಾಸಕ ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್​ ಪಾಲ್​ರನ್ನು 2006ರಲ್ಲಿ ಅಪರಹಣ ಮಾಡಿದ ಆರೋಪದಡಿ ಗ್ಯಾಂಗ್​ಸ್ಟರ್​, ರಾಜಕಾರಣಿ ಅತಿಕ್​ ಅಹ್ಮದ್ (Atiq Ahmed)​​ಗೆ ಇಂದು ಪ್ರಯಾಗ್​ರಾಜ್ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಅತಿಕ್​ ಅಹ್ಮದ್​ ​ ಸಮಾಜವಾದಿ ಪಕ್ಷ (ಅಖಿಲೇಶ್ ಯಾದವ್ ಪಕ್ಷ)ದ ರಾಜಕಾರಣಿಯಾಗಿದ್ದ. ಫಲ್ಪುರ ಕ್ಷೇತ್ರದ ಸಂಸದನಾಗಿದ್ದ. ರಾಜು ಪಾಲ್ ಹತ್ಯೆಯಲ್ಲಿ ಈತನ ಕೈವಾಡ ಇದೆ ಮತ್ತು ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್​ ಅಪಹರಣ ಕೇಸ್​ನಲ್ಲಿ ಕೂಡ ಭಾಗಿಯಾದ ಆರೋಪ ಹೊತ್ತ ಹಿನ್ನೆಲೆಯಲ್ಲಿ ಅವನನ್ನು 2009ರಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು.

ಈ ಅತೀಕ್​ ಅಂತಿಂಥಾ ಕ್ರಿಮಿನಲ್ ಅಲ್ಲ, ರಾಜಕಾರಣಿಯಾಗಿದ್ದರೂ, ಅದರಾಚೆಗೆ ಹಲವು ಸಮಾಜ ವಿರೋಧಿ ಕೃತ್ಯ ಎಸಗಿದ್ದಾನೆ. 1985ರಿಂದ ಅವರ ವಿರುದ್ಧ ಸುಮಾರು 100ಕೇಸ್​ಗಳು ದಾಖಲಾಗಿದ್ದವು. ಅದರಲ್ಲಿ ಇನ್ನೂ 50 ಕ್ಕೂ ಹೆಚ್ಚು ಕೇಸ್​ಗಳು ವಿಚಾರಣಾ ಹಂತದಲ್ಲೇ ಇದ್ದರೆ, 12 ಕೇಸ್​ನಲ್ಲಿ ಖುಲಾಸೆಗೊಂಡಿದ್ದಾನೆ. ಎರಡು ಕೇಸ್​ಗಳನ್ನು 2004ರಲ್ಲಿ ಅಂದರೆ ಅತೀಕ್​ ಮೊದಲ ಬಾರಿ ಸಂಸದನಾದ ನಂತರ ಉತ್ತರ ಪ್ರದೇಶದಲ್ಲಿ ಅಂದು ಇದ್ದ ಸಮಾಜವಾದಿ ಪಕ್ಷದ ಸರ್ಕಾರ ವಾಪಸ್ ಪಡೆದಿತ್ತು. ಇನ್ನು ಇವನ ಸಹೋದರ ಆಶ್ರಫ್​ ವಿರುದ್ಧ 53 ಕೇಸ್​ಗಳಿದ್ದು, ಅದರಲ್ಲಿ ಇದುವರೆಗೆ ಒಂದು ಕೇಸ್​ನಲ್ಲಿ ಖುಲಾಸೆ ಗೊಂಡಿದ್ದಾನೆ. ಉಳಿದೆಲ್ಲ ಕೇಸ್​ಗಳೂ ವಿಚಾರಣೆ ಹಂತದಲ್ಲಿವೆ.

ಇದನ್ನೂ ಓದಿ: 2006ರ ಅಪಹರಣ ಪ್ರಕರಣ: ಗ್ಯಾಂಗ್‌ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್​​ಗೆ ಜೀವಾವಧಿ ಶಿಕ್ಷೆ, ಸಹೋದರನ ಖುಲಾಸೆ

ಅತಿಕ್​​ನ ಒಬ್ಬ ಮಗನ ವಿರುದ್ಧ ಎಂಟು ಕೇಸ್​ಗಳು ಇದ್ದು, ಅದರಲ್ಲಿ ಏಳು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಒಂದು ಕೇಸ್​ ಬಗ್ಗೆ ತನಿಖೆ ನಡೆಯುತ್ತಿದೆ. ಹಾಗೇ ಇನ್ನೊಬ್ಬ ಪುತ್ರ ಉಮರ್ ಅಹ್ಮದ್​ ವಿರುದ್ಧದ ಕೇಸ್​ವೊಂದು ಸಿಬಿಐ ಕೋರ್ಟ್​ನಲ್ಲಿ ಬಾಕಿ ಇದ್ದು, ಇನ್ನೊಂದು ಪ್ರಕರಣದ ತನಿಖೆ ಮುಂದುವರಿದಿದೆ. ಮತ್ತೂ ಒಬ್ಬ ಪುತ್ ಅಸಾದ್​ ವಿರುದ್ಧ ಒಂದು ಕೇಸ್​ ಇದೆ. ಪತ್ನಿ ಶೈಷ್ಟಾ ವಿರುದ್ಧವೂ ನಾಲ್ಕು ಕೇಸ್​ಗಳಿದ್ದಾವೆ. ಒಟ್ಟಾರೆ ಇದು ಕ್ರಿಮಿನಲ್ ಕುಟುಂಬವೇ ಎನ್ನಿಸಿದೆ.

ಮರಣದಂಡನೆಗೆ ಆಗ್ರಹ
ಉಮೇಶ್ ಪಾಲ್​ ಅಪಹರಣದಲ್ಲಿ ಅತೀಕ್ ಅಹ್ಮದ್​ ಅಪರಾಧಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಉಮೇಶ್ ಪಾಲ್​ ತಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಅತೀಕ್​​ಗೆ ಮರಣ ದಂಡನೆ ವಿಧಿಸಬೇಕು ಎಂದು ಕೇಳಿದ್ದಾರೆ. ಅಷ್ಟೆ ಅಲ್ಲ ನನಗೆ ಯೋಗಿ ಆದಿತ್ಯನಾಥ್ ಮೇಲೆ ನಂಬಿಕೆಯಿದೆ. ಖಂಡಿತವಾಗಿಯೂ ಅತೀಕ್​ಗೆ ಮರಣ ದಂಡನೆ ವಿಧಿಸುತ್ತಾರೆ ಎಂದೂ ಹೇಳಿದ್ದಾರೆ. ಸದ್ಯ ಅತೀಕ್​​ನನ್ನು ವಾಪಸ್ ಶಬರಿಮತಿ ಜೈಲಿಗೆ ಕಳಿಸಲಾಗಿದೆ.

Exit mobile version