Site icon Vistara News

Amith Sha : ಬಿಜೆಪಿಯ ಭ್ರಷ್ಟರು ಶುಭ್ರರೇ; ಅಮಿತ್​ ಶಾಗೆ ಬಿಆರ್​ಎಸ್​ನ ಪೋಸ್ಟರ್​ ಸ್ವಾಗತ!

Are BJP's corrupt people clean? BRS poster welcome to Amit Shah!

#image_title

ಹೈದರಾಬಾದ್​: ತೆಲಂಗಾಣದ ಆಡಳಿತ ಪಕ್ಷ ಬಿಆರ್​ಎಸ್​ ಬಿಜೆಪಿ ಹಾಗೂ ಅದರ ನಾಯಕರ ವಿರುದ್ಧ ಪೋಸ್ಟರ್​ ಸಮರವನ್ನು ಮುಂದುವರಿಸಿದೆ. ಅಂತೆಯೇ ಭಾನುವಾರ ಸಿಐಎಸ್​ಎಫ್​ ರೈಸಿಂಗ್​ ಡೇ ಕಾರ್ಯಕ್ರಮಕ್ಕೆ ಆಗಮಿಸಿದ ಕೇಂದ್ರ ಗೃಹಮಂತ್ರಿ ಅಮಿತ್​ ಶಾ (Amith Sha) ಅವರಿಗೂ ಪೋಸ್ಟರ್​ ಸ್ವಾಗತ ನೀಡುವ ಮೂಲಕ ಲೇವಡಿ ಮಾಡಿದೆ. ಅದರಲ್ಲಿ ಬಿಜೆಪಿಯಲ್ಲಿರುವ ಭ್ರಷ್ಟರು ಶುಭ್ರಗೊಂಡಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕಾಗಿ ವಾಷಿಂಗ್ ಪೌಂಡರ್ ನಿರ್ಮಾದ ಐಕಾನಿಕ್​ ಬಾಲಕಿಯ ಚಿತ್ರವನ್ನು ಬಳಸಿಕೊಂಡಿದ್ದಾರೆ.

ಎಎನ್​ಐ ಶೇರ್​ ಮಾಡಿರುವ ವಿಡಿಯೊ ಇಲ್ಲಿದೆ

ಡೆಲ್ಲಿ ಲಿಕ್ಕರ್​ ಹಗರಣದಲ್ಲಿ ತೆಲಂಗಾಣ ಸಿಎಂ ಕೆ ಚಂದ್ರಶೇಖರ್​ ರಾವ್​ ಅವರ ಪುತ್ರಿ ಕೆ ಕವಿತಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದು ಬಿಎಆರ್​ಎಸ್​ ನಾಯಕರನ್ನು ಕೆರಳಿಸಿದ್ದು, ಅಮಿತ್​ ಶಾ ಹೈದರಾಬಾದ್​ಗೆ ಆಗಮಿಸುವ ವೇಳೆ ದೊಡ್ಡ ಬ್ಯಾನರ್ ಹಾಕಿ, ಭ್ರಷ್ಟಾಚಾರದ ಆರೋಪ ಹೊತ್ತಿರುವ ಬಿಜೆಪಿ ನಾಯಕರ ಚಿತ್ರಗಳನ್ನು ಹಾಕಿ ಇವರೆಲ್ಲರೂ ಶುಭ್ರವಾಗಿದ್ದು ನಿರ್ಮಾ ಹಾಕಿ ತೊಳೆದ ಮೇಲೆಯೇ ಎಂದು ಪ್ರಶ್ನಿಸಿದ್ದಾರೆ. ಬ್ಯಾನರ್​ನಲ್ಲಿ ಮಾಜಿ ಸಚಿವ ಈಶ್ವರಪ್ಪ, ಲೋಕಾಯುಕ್ತ ಬಲೆಗೆ ಬಿದ್ದಿರುವ ಬಿಜೆಪಿ ಮುಖಂಡ ಮಾಡಾಳ್​ ವಿರೂಪಾಕ್ಷಪ್ಪ, ಮಹಾರಾಷ್ಟ್ರದ ಬಿಜೆಪಿ ನಾಯಕ ನಾರಾಯಣ್ ರಾಣೆ, ಪಶ್ಚಿಮ ಬಂಗಾಳದ ಸುವೇಂದು ಅಧಿಕಾರಿ, ಜ್ಯೋತಿರಾಧಿತ್ಯ ಸಿಂಧ್ಯಾ ಮತ್ತಿತರರ ಚಿತ್ರಗಳಿವೆ.

ಬಿಎಆರ್​ಎಸ್​ ಶಾಸಕಿಯಾಗಿರುವ ಕವಿತಾ ಅವರನ್ನು ಶನಿವಾರ ಇಡಿ ಅಧಿಕಾರಿಗಳು ಸತತವಾಗಿ ವಿಚಾರಣೆ ನಡೆಸಿದ್ದರು. ಇದೇ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಕೂಡ ಬಂಧನಕ್ಕೆ ಒಳಗಾಗಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿಯ ವಿರುದ್ಧ ಆಪ್​ ಕೂಡ ಪೋಸ್ಟರ್​ ಅಭಿಯಾನ ಆರಂಭಿಸಿದೆ. ಅವರು ವಾಷಿಂಗ್​ ಪೌಡರ್​ ಬಿಜೆಪಿ ಎಂಬ ಚಿತ್ರವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಶೇರ್ ಮಾಡಿದ್ದಾರೆ. ಅದರಲ್ಲಿ ಗಣಿ ಅಕ್ರಮ ಪ್ರಕಣದಲ್ಲಿ ಜೈಲು ಸೇರಿರುವ ಕರ್ನಾಟಕದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಚಿತ್ರವೂ ಇದೆ.

Exit mobile version