Site icon Vistara News

ಕಬಾಬ್​ ಕೆಟ್ಟದಾಗಿತ್ತು ಎಂದು ಅಡುಗೆಯವನನ್ನೇ ಹತ್ಯೆ ಮಾಡಿದ ದುಷ್ಕರ್ಮಿಗಳು; ಹಣ ತರಲೆಂದು ಹೋದವ ಹೆಣವಾಗಿದ್ದ

Assailants allegedly shot dead Cook of Hotel Over Kabab in Uttar Pradesh

#image_title

ಲಖನೌ: ಒಮ್ಮೊಮ್ಮೆ ಎಂತೆಂಥಾ ಕ್ಷುಲ್ಲಕ ವಿಷಯಗಳೆಲ್ಲ ಕೊಲೆಗೆ ಕಾರಣವಾಗಿ ಬಿಡುತ್ತವೆ. ಒಂದು ಸಣ್ಣ ಜಗಳ ಯಾರದ್ದೋ ಜೀವ ತೆಗೆದುಬಿಡುತ್ತದೆ. ಬರೇಲಿಯಲ್ಲೂ ಹಾಗೇ, ಆಗಿದೆ. ನಾನ್​ ವೆಜ್​ ಹೋಟೆಲ್​ವೊಂದರಲ್ಲಿ ಕಬಾಬ್​​ನ ಗುಣಮಟ್ಟ ಸರಿಯಾಗಿಲ್ಲ ಎಂದು ಕ್ಯಾತೆ ತೆಗೆದ (kebabs Dispute) ಇಬ್ಬರು ಗ್ರಾಹಕರು, ಬಳಿಕ ಹೋಟೆಲ್​ನ ಅಡುಗೆಯವನನ್ನೇ ಹತ್ಯೆ ಮಾಡಿದ್ದಾರೆ. ಬರೇಲಿ ಡೆವಲೆಪ್​​ಮೆಂಟ್ ಅಥೋರಿಟಿ (BDA) ಕಚೇರಿ ಬಳಿಯೇ ಈ ಘಟನೆ ನಡೆದಿದೆ. ನಾನ್​ ವೆಜ್​ ಉಪಾಹಾರ ಗೃಹಕ್ಕೆ ಎಸ್​ಯುವಿ ಕಾರಿನಲ್ಲಿ ಇಬ್ಬರು ಬಂದಿದ್ದರು. ಅವರು ಅಲ್ಲಿ ಕಬಾಬ್​ ತಿಂದಿದ್ದಾರೆ. ಬಳಿಕ ರುಚಿ-ಗುಣಮಟ್ಟ ಚೆನ್ನಾಗಿಲ್ಲ ಎಂದು ಜಗಳ ತೆಗೆದಿದ್ದಾರೆ. ಅದಾದ ಮೇಲೆ ಅಡುಗೆಯವನನ್ನೇ ಕೊಲೆ ಮಾಡಿದ್ದಾರೆ. ಹಂತಕರಾದ ಮಯಾನ್​ ರಸ್ಟೋಗಿ ಅಲಿಯಾಸ್ ಗೋಲ್ಡನ್​ ಬಾಬಾ ಮತ್ತು ಅವನ ಸ್ನೇಹಿತ ತಝೀಮ್ ಶಮಿಯನ್ನು ರಾಂಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಅಂದಹಾಗೇ, ಘಟನೆ ನಡೆದಿದ್ದು ಪ್ರಿಯದರ್ಶಿನಿ ನಗರದ ಒಂದು ಚಿಕ್ಕ ಹೋಟೆಲ್​​ನಲ್ಲಿ. ಇವರಿಬ್ಬರೂ ಕಂಠಪೂರ್ತಿ ಕುಡಿದು ಅಲ್ಲಿಗೆ ಬಂದಿದ್ದರು. ಕಬಾಬ್​ಗೆ ಆರ್ಡರ್​ ಮಾಡಿದ್ದಾರೆ. ತಂದಿಟ್ಟ ಕಬಾಬ್​​ನ್ನು ಸ್ವಲ್ಪ ತಿನ್ನುತ್ತಿದ್ದಂತೆ ಜಗಳ ಎತ್ತಿದ್ದಾರೆ. ಹೋಟೆಲ್ ಮಾಲೀಕ ಅಂಕುರ್ ಸಬರ್​​ವಾಲ್ ಜತೆ ಜಗಳ ತೆಗೆದಿದ್ದಾರೆ. ಅಂಕುರ್​ ಕೂಡ ಧ್ವನಿ ಎತ್ತರಿಸಿದ್ದಾರೆ. ಹೀಗೆ ವಾದ-ವಾಗ್ವಾದ ಮಿತಿ ಮೀರಿದೆ. ಆ ಇಬ್ಬರೂ ಗ್ರಾಹಕರು ಹಣವನ್ನೂ ಕೊಡದೆ, ಕಾರು ಹತ್ತಿ ಹೋಗಿದ್ದಾರೆ.

ಇದನ್ನೂ ಓದಿ: 10 ಸಾವಿರ ರೂ. ವಿವಾದ: ಹೈಕೋರ್ಟ್​ ಆವರಣದಲ್ಲಿ ಹಗಲು ಹೊತ್ತಲ್ಲೇ ಭೀಕರ ಹತ್ಯೆ

ಅಂಕುರ್ ಸಬರ್​ವಾಲಾ ಅಷ್ಟಕ್ಕೇ ಬಿಡಲಿಲ್ಲ. ಆ ಇಬ್ಬರಿಂದ 120 ರೂಪಾಯಿ ತರುವಂತೆ ತಮ್ಮ ಹೋಟೆಲ್​​ನ ಒಬ್ಬ ಅಡುಗೆಯವನಾದ ನಸೀರ್ ಅಹ್ಮದ್​​ನನ್ನು ಕಳಿಸಿದ್ದಾರೆ. ಆ ನಸೀರ್​​ ಅಹ್ಮದ್​​ಗೆ ಹಣ ಕೊಟ್ಟು ಕಳಿಸುವ ಬದಲು ಗೋಲ್ಡನ್​ ಬಾಬಾ ಮತ್ತು ಅವನ ಸ್ನೇಹಿತ ತಝೀಮ್ ಶಮಿ ಸೇರಿ ಅವನನ್ನು ದೇವಸ್ಥಾನವೊಂದರ ಬಳಿ ಹತ್ಯೆ ಮಾಡಿ, ನೈನಿತಾಲ್​ ರಸ್ತೆ ಮಾರ್ಗವಾಗಿ ಎಸ್​ಯುವಿ ಮೂಲಕ ಪರಾರಿಯಾಗಿದ್ದರು. ಹೋಟೆಲ್ ಮಾಲೀಕ ದೂರು ಕೊಟ್ಟಿದ್ದರು. ಬಳಿಕ ಇವರ ಕಾರನ್ನು ಉತ್ತರಾಖಂಡ್​​ನ ಕಾಶಿಪುರದಲ್ಲಿ ಟ್ರೇಸ್​ ಮಾಡಲಾಗಿತ್ತು. ಉತ್ತರಾಖಂಡ್​ ಪೊಲೀಸರೂ ಸಂಪೂರ್ಣವಾಗಿ ಅಲರ್ಟ್ ಆಗಿದ್ದರು. ಬಳಿಕ ಆರೋಪಿಗಳು ಉತ್ತರ ಪ್ರದೇಶದ ರಾಂಪುರದ ಬಳಿಯೇ ಸಿಕ್ಕಿಬಿದ್ದಿದ್ದಾರೆ.

Exit mobile version