Site icon Vistara News

Gujarat Polls| ಮತದಾನ ಶುರುವಾದ ಬೆನ್ನಲ್ಲೇ ಬಿಜೆಪಿ ಅಭ್ಯರ್ಥಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ; ಕಾರು ಧ್ವಂಸ

Attack On BJP candidate Piyush Patel in Gujarat

ಗುಜರಾತ್​​ ವಿಧಾನಸಭೆ ಮೊದಲ ಹಂತದ ಚುನಾವಣೆಯ ಮತದಾನ ಇಂದು ಬೆಳಗ್ಗೆಯಿಂದ ಪ್ರಾರಂಭವಾಗಿದ್ದು, ಈ ಮಧ್ಯೆ ವನ್ಸ್ಡಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಯುಷ್​ ಪಟೇಲ್​ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದು ವರದಿಯಾಗಿದೆ. ಪಿಯುಷ್​ ಪಟೇಲ್​ ಅವರು ಇಂದು ವನ್ಸ್ಡಾದ ಝಾರಿ ಗ್ರಾಮದಲ್ಲಿ ಇದ್ದಾಗ, ದುಷ್ಕರ್ಮಿಗಳು ಅಟ್ಯಾಕ್​ ಮಾಡಿದ್ದಾರೆ. ಅವರು ಪ್ರಯಾಣ ಮಾಡುತ್ತಿದ್ದ ಕಾರನ್ನು ಧ್ವಂಸ ಗೊಳಿಸಿ, ಬಳಿಕ ಪಿಯುಷ್​ಗೆ ಥಳಿಸಿದ್ದಾರೆ. ಘಟನೆಯಲ್ಲಿ ಪಿಯುಷ್ ಪಟೇಲ್​ ಗಾಯಗೊಂಡಿದ್ದಾರೆ.

ಪಿಯುಷ್​ ಪಟೇಲ್​ ಮೇಲೆ ದಾಳಿ ನಡೆಸಿದವರು ಕಾಂಗ್ರೆಸ್​ ಅಭ್ಯರ್ಥಿ ಅನಂತ್ ಪಟೇಲ್​​ ಅವರ ಬೆಂಬಲಿಗರು ಎಂದು ಬಿಜೆಪಿ ಆರೋಪ ಮಾಡಿದೆ. ಅವರು ಬೇರೆ ಯಾವುದೇ ದುಷ್ಕರ್ಮಿಗಳು ಅಲ್ಲ, ಕಾಂಗ್ರೆಸ್ಸಿಗರದ್ದೇ ಕೆಲಸ ಎಂದು ಹೇಳಿದೆ. ಪಿಯುಷ್​ ಪಟೇಲ್​ ಬೆಂಬಲಿಗರು ವನ್ಸ್ಡಾ ಪೊಲೀಸ್​ ಸ್ಟೇಶನ್​​ ಬಳಿ ಹೋಗಿ, ಗಲಾಟೆ ಮಾಡಿದ್ದಲ್ಲದೆ, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದ್ದಾರೆ. ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಗುಜರಾತ್​ ವಿಧಾನಸಭೆಯ 182 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಮತದಾನ ಇಂದು (ಡಿ.1) ಪ್ರಾರಂಭವಾಗಿದೆ. ಹಾಗೇ, ಡಿ.5ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿ.8ಕ್ಕೆ ಮತ ಎಣಿಕೆಯಾಗಲಿದೆ. ಅಂದಹಾಗೇ, ಈ ವನ್ಸ್ಡಾ ವಿಧಾನಸಭಾ ಕ್ಷೇತ್ರ ನವಸ್ರಿ ಜಿಲ್ಲೆಯಲ್ಲಿದ್ದು, ಈ ಸೀಟ್​​ನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.

ಇದನ್ನೂ ಓದಿ: Gujarat Election | ಗುಜರಾತ್‌ನಲ್ಲಿ ಇಂದು ಮೊದಲ ಹಂತದ ಮತದಾನ, ಹೇಗಿದೆ ಚುನಾವಣೆ ಹವಾಮಾನ?

Exit mobile version