Site icon Vistara News

Chandrashekhar Azad: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್​ಗೆ ಗುಂಡೇಟು; ಆಸ್ಪತ್ರೆಗೆ ದಾಖಲು

Bhim Army Chief Chandrashekhar Azad

ಭೀಮ್​ ಆರ್ಮಿ ಸಂಘಟನೆಯ ಮುಖ್ಯಸ್ಥ (Bhim Army chief) ಚಂದ್ರಶೇಖರ್ ಆಜಾದ್​ಗೆ (Chandrashekhar Azad) ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಂದ್ರಶೇಖರ್ ಆಜಾದ್​ ಅವರು ಉತ್ತರ ಪ್ರದೇಶದ ಶಹರಾನ್​ಪುರದಲ್ಲಿ ಕಾರಿನಲ್ಲಿ ಹೋಗುತ್ತಿದ್ದರು. ಅದೇ ವೇಳೆ, ಕಾರಿನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ (Bhim Army chief Shot). ಗಾಯಗೊಂಡ ಚಂದ್ರಶೇಖರ್ ಆಜಾದ್​ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಶಹರಾನ್​ಪುರ ಎಸ್​ಎಸ್​ಪಿ ಡಾ.ವಿಪಿನ್ ತಾಡಾ ತಿಳಿಸಿದ್ದಾರೆ.

ಚಂದ್ರಶೇಖರ್ ಆಜಾದ್ ಅವರ ಎಡಭಾಗದ ಸೊಂಟಕ್ಕೆ ಗುಂಡು ಬಿದ್ದು ಗಾಯವಾಗಿದೆ. ಗುಂಡು ಅವರ ಕಾರಿನ ಕಿಟಕಿ ಗಾಜನ್ನು ಸೀಳಿಕೊಂಡು ಬಂದು ಅವರ ಸೊಂಟಕ್ಕೆ ತಗುಲಿ ಹಾರಿದೆ. ಚಂದ್ರಶೇಖರ್ ಆಜಾದ್​ಗೆ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಸದ್ಯ ಅವರನ್ನು ಶಹರಾನ್​ಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಚಂದ್ರಶೇಖರ್ ಆಜಾದ್ ಫೇಸ್​ಬುಕ್​ ಪೋಸ್ಟ್​ನಲ್ಲಿ ಈ ಬಗ್ಗೆ ಪೋಸ್ಟ್ ಶೇರ್ ಮಾಡಲಾಗಿದೆ. ಹಾಗೇ, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

Exit mobile version