Site icon Vistara News

Yogi Adityanath | ಯೋಗಿಯನ್ನು ಹಿಂದು ಉಗ್ರಗಾಮಿ ಎಂದು ಕರೆದ ಮುಸ್ಲಿಮ್​ ಕೌನ್ಸಿಲ್​ಗೆ ತಿರುಗೇಟು ಕೊಟ್ಟ ಬಿಜೆಪಿ

Gangster Atiq Ahmed Killed CM Yogi Adityanath ordered probe

ನವ ದಹೆಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರನ್ನು ಹಿಂದು ಉಗ್ರಗಾಮಿ ಸನ್ಯಾಸಿ ಎಂದು ಕರೆದ ಅಮೆರಿಕದ ಮುಸ್ಲಿಮ್​ ಕೌನ್ಸಿಲ್​ ವಿರುದ್ಧ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ವೈಯಕ್ತಿಕ ತೇಜೋವಧೆ ಎಂಬುದಾಗಿ ಆರೋಪಿಸಿದೆ. ಸ್ವಿಜರ್ಲೆಂಡ್​ನ ದಾವೋಸ್​ನಲ್ಲಿ ವರ್ಲ್ಡ್​ ಎಕನಾಮಿಕ್​ ಫೋರಮ್​ನಲ್ಲಿ (WEF​) ಯೋಗಿ ಆತಿಥ್ಯನಾಥ್​ ಅವರು ಪಾಲ್ಗೊಳ್ಳುವುದನ್ನು ಆಕ್ಷೇಪಿಸಿ ಅಮೆರಿಕನ್​ ಮುಸ್ಲಿಮ್​ ಕೌನ್ಸಿಲ್​ (IAMC) ಆಯೋಜಕರಿಗೆ ಪತ್ರ ಬರೆದಿತ್ತು. ಆ ಪತ್ರದಲ್ಲಿ ಯೋಗಿ ಆತಿಥ್ಯನಾಥ್ ಅವರನ್ನು ಮುಸ್ಲಿಮ್​ ವಿರೋಧಿ ಎಂದು ಬಿಂಬಿಸಲಾಗಿದೆ.

ಭಾರತವನ್ನು ವಿಶ್ವ ಗುರು ಮಾಡಲು ಹೊರಟಿರುವ ನಾಯಕರ ವಿರುದ್ಧ ವಿಶ್ವ ಮಟ್ಟದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಉತ್ತರ ಪ್ರದೇಶದ ಸಚಿವ ಹಾಗೂ ಬಿಜೆಪಿ ನಾಯಕ ಧರಮ್​ ಪಾಲ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಪ್ರಧಾನ ಮಂತ್ರಿ ಮೋದಿಯ ಕನಸನ್ನು ನನಸಾಗಿಸಲು ಹಗಲಿರುಳು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಭಾರತದ ಘನತೆಯನ್ನು ಕುಗ್ಗಿಸುವ ಉದ್ದೇಶದಿಂದ ಕೆಲವರು ಮಿಥ್ಯಾರೋಪಗಳನ್ನು ಮಾಡುತ್ತಿದ್ದಾರೆ. ಇವೆಲ್ಲವೂ ಕುತಂತ್ರ . ಹಿಂದೆ ಇದೇ ಮಾದರಿಯ ಆರೋಪಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಮಾಡಲಾಗುತ್ತಿತ್ತು. ಈಗ ಯೋಗಿ ಆದಿತ್ಯನಾಥ್​ ಅವರನ್ನು ಗುರಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಯೋಗಿ ಆದಿತ್ಯನಾಥ್​ ಅವರನ್ನು ಟೀಕಿಸುವ ವ್ಯಕ್ತಿಗಳು ಉತ್ತರ ಪ್ರದೇಶಕ್ಕೆ ಬರಬೇಕು. ಇಲ್ಲಿ ಎಲ್ಲರನ್ನೂ ಒಳಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆಯುತ್ತಿವೆ ಎಂಬುದನ್ನು ನೋಡಬೇಕು. ಯೋಗಿ ಜಾರಿಗೆ ತಂದಿರುವ ಹಲವು ಯೋಜನೆಗಳ ಫಲ ಮುಸ್ಲಿಮರಿಗೂ ದೊರೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಏನಿದು ವಿವಾದ?

ಸ್ವಿಜರ್ಲೆಂಡ್​ನಲ್ಲಿ ದಾವೋಸ್​​ನಲ್ಲಿ ಜನವರಿ 16ರಂದು ಆರಂಭಗೊಂಡಿರುವ ವರ್ಲ್ಡ್​ ಎಕನಾಮಿಕ್​ ಫೋರಂ ಐದು ದಿನಗಳ ನಡೆಯಲಿದೆ. ಯೋಗಿ ಆತಿಥ್ಯನಾಥ್​ ಅವರು ಆ ಸಮ್ಮೇಳನದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ಮಂಡಿಸಬೇಕಾಗಿತ್ತು. ಇದನ್ನು ಐಎಎಮ್​ಸಿ ವಿರೋಧಿಸಿದೆ.

ಯೋಗಿ ಆದಿತ್ಯನಾಥ್ ಅವರು ಮಾನವತೆಯ ವಿರುದ್ಧ ನಡೆಸುತ್ತಿರುವ ಅಪರಾಧವನ್ನು ಕಾನೂನುಬದ್ಧಗೊಳಿಸಬಾರದು. ಅವರೊಬ್ಬರು ಹಿಂದು ಉಗ್ರಗಾಮಿ ಸನ್ಯಾಸಿ. ಸಿಎಎ ವಿರೋಧಿಸಿದವರನ್ನು ನಿಂದಿಸಿದವರು. ಅವರೊಬ್ಬ ಕುಖ್ಯಾತ ವ್ಯಕ್ತಿ ಎಂಬುದಾಗಿ ಮುಸ್ಲಿಮ್ ಕೌನ್ಸಿಲ್​ ಆರೋಪಿಸಿತ್ತು.

ಯೋಗಿ ಅವರು ಅಪರಾಧದ ದಾಖಲೆಗಳನ್ನು ಹೊಂದಿದ್ದಾರೆ. ಜನರನ್ನು ವಿಭಜಿಸುವ ಮೂಲಕ ರಾಜಕೀಯ ನಡೆಸುತ್ತಿದ್ದಾರೆ ಎಂಬುದಾಗಿ ಕೌನ್ಸಿಲ್​ ವರದಿ ನೀಡಿದೆ. ಆದರೆ ಅದಕ್ಕೆ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ.

ಇದನ್ನೂ ಓದಿ | CM Yogi Adityanath | ಮುಂಬಯಿನಲ್ಲಿ ಉದ್ಯಮಿಗಳು, ಬಾಲಿವುಡ್‌ ನಿರ್ಮಾಪಕರ ಜತೆ ಸಿಎಂ ಯೋಗಿ ಆದಿತ್ಯನಾಥ್‌ ಮಾತುಕತೆ

Exit mobile version