Site icon Vistara News

Vande Bharat: ಚೆನ್ನೈ-ಕೊಯಮತ್ತೂರ್​ ವಂದೇ ಭಾರತ್​ ರೈಲು ಸಂಚಾರ ಶುರು; ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ

Chennai Coimbatore Vande Bharat Express Train Flags Off By PM Modi

#image_title

ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು ಇಂದು ತೆಲಂಗಾಣದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಬಳಿಕ ಚೆನ್ನೈಗೆ ತೆರಳಿ, ಅಲ್ಲಿನ ಡಾ. ಎಂಜಿಆರ್​ ಚೆನ್ನೈ ಸೆಂಟ್ರಲ್​ ರೈಲ್ವೆ ಸ್ಟೇಶನ್​​ನಲ್ಲಿ, ದೇಶದ 14ನೇ ವಂದೇ ಭಾರತ್ ಎಕ್ಸ್​ಪ್ರೆಸ್ (Vande Bharat) ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ಈ ರೈಲು ಚೆನ್ನೈ-ಕೊಯತ್ತೂರ್​​ ಮಾರ್ಗದಲ್ಲಿ ಸಂಚಾರ ಮಾಡಲಿದೆ. ಇಲ್ಲಿಗೆ ಬರುವುದಕ್ಕೂ ಮೊದಲು ಪ್ರಧಾನಿ ಮೋದಿಯವರು ತೆಲಂಗಾಣದಲ್ಲಿ ಸಿಕಂದರಾಬಾದ್​-ತಿರುಪತಿ ವಂದೇ ಭಾರತ್​ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು.

ರೈಲ್ವೆ ಸ್ಟೇಶನ್​​ನ 10ನೇ ಪ್ಲಾಟ್​ಫಾರ್ಮ್​​ನಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಚಾಲನೆ ಕೊಡುವಾಗ ‘ಮೋದಿ..ಮೋದಿ’ ಎಂದು ಘೋಷಣೆ ಕೂಗಲಾಗುತ್ತಿತ್ತು. 9ನೇ ಪ್ಲಾಟ್​ಫಾರ್ಮ್​​ನ ಬೇಲಿಯಾಚೆಗೂ ಅಪಾರ ಜನ ತುಂಬಿದ್ದರು. ಹಸಿರು ನಿಶಾನೆ ತೋರಿದ ಬಳಿಕ ಪ್ರಧಾನಿ ಮೋದಿಯವರು ರೈಲಿನ ಲೋಕೋ ಪೈಲೆಟ್​​ಗಳ ಜತೆ ಮಾತುಕತೆ ನಡೆಸಿದರು. ಈ ವೇಳೆ ಅವರೊಂದಿಗೆ ತಮಿಳುನಾಡು ರಾಜ್ಯಪಾಲ ಆರ್​.ಎನ್​.ರವಿ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಇದ್ದರು. ಈ ರೈಲು ಪೆರಂಬೂರ್​, ಅರಕ್ಕೋಣಂ, ಗುಡಿಯಾಟ್ಟಂ, ವಾಣಿಯಂಬಾಡಿ, ತಿರುಪತ್ತೂರ್, ಮೊರಪ್ಪುರ್, ಸೇಲಂ, ಈರೋಡ್ ಮತ್ತು ತಿರುಪುರ್ ಸ್ಟೇಶನ್​​ಗಳಲ್ಲಿ ನಿಲುಗಡೆಯಾಗಲಿದೆ.

ಇದನ್ನೂ ಓದಿ: Vande Bharat Express: ದೇಶದ 13ನೇ ವಂದೇ ಭಾರತ್​ ರೈಲು ಸಂಚಾರಕ್ಕೆ ಪ್ರಧಾನಿ ಮೋದಿಯವರಿಂದ ಚಾಲನೆ

ನಾಳೆ (ಏಪ್ರಿಲ್​ 9)ಯಿಂದ ಈ ರೈಲು ಸಂಚಾರ ಶುರುವಾಗಲಿದೆ. ಎಂಟು ಕೋಚ್​ಗಳನ್ನು ಹೊಂದಿರುವ ಇದು ಮುಂಜಾನೆ 6ಕ್ಕೆ ಕೊಯಂಬತ್ತೂರ್​ನ್ನು ಬಿಟ್ಟರೆ, ಬೆಳಗ್ಗೆ 11.50ಕ್ಕೆಲ್ಲ ಚೆನ್ನೈ ತಲುಪಲಿದೆ. ಹಾಗೇ, ಮಧ್ಯಾಹ್ನ 2.25ಕ್ಕೆ ಚೆನ್ನೈನಿಂದ ಹೊರಟು ಸಂಜೆ 8.15ಕ್ಕೆ ಕೊಯಂಬತ್ತೂರ್​ ತಲುಪಲಿದೆ. ಈ ರೈಲು ಸಂಚಾರಕ್ಕೆ ಚಾಲನೆ ಕೊಟ್ಟು ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು, 5ಜಿ ಪ್ರಾಜೆಕ್ಟ್​​ನ ಬಗ್ಗೆ ಕೆಲಸ ಮಾಡುತ್ತಿರುವ ಐಐಟಿ ಮದ್ರಾಸ್​ನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

Exit mobile version