Site icon Vistara News

Murder: ಸಜೀವವಾಗಿ ದಹಿಸಿ 10ನೇ ತರಗತಿ ವಿದ್ಯಾರ್ಥಿ ಕೊಲೆ, ಮೃತನ ತಂಗಿಯನ್ನು ಚುಡಾಯಿಸುತ್ತಿದ್ದ ಆರೋಪಿ

woman urinated next to the house was hit with a rod on her private part

ನವದೆಹಲಿ: ಟ್ಯೂಷನ್‌ಗೆ ಹೊರಟಿದ್ದ ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬನ (Class 10 Student) ಪೆಟ್ರೋಲ್ (Petrol) ಸುರಿದು ಬೆಂಕಿ ಹಚ್ಚಿ ಸಜೀವವಾಗಿ ದಹಿಸಿದ (Murder) ಘಟನೆ ಆಂಧ್ರ ಪ್ರದೇಶದ (Andhra Pradesh) ಬಾಪಟ್ಲಾ ಜಿಲ್ಲೆಯಲ್ಲಿ (Bapatla district) ನಡೆದಿದೆ. ಮೃತ ವಿದ್ಯಾರ್ಥಿಯನ್ನು 15 ವರ್ಷದ ಅಮರನಾಥ ಎಂದು ಗುರುತಿಸಲಾಗಿದೆ. ಆತ ಸಾಯುವ ಮುನ್ನ ವೆಂಕಿ ಎಂಬಾತ ಸೇರಿ ಮೂವರು ಜನರು ಹೆಸರು ಹೇಳಿದ್ದಾನೆ. ಬಾಲಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಬದಕುಳಿಯಲಿಲ್ಲ. ವೆಂಕಿ ಅಲಿಯಾಸ್ ವೆಂಕಟೇಶ್ವರ್ ಎಂಬಾತ ಮೃತ ಸಹೋದರಿಯನ್ನು ಚುಡಾಯಿಸುತ್ತಿದ್ದ ಎಂದು ಹೇಳಲಾಗುತ್ತಿದೆ.

ವೆಂಕಟೇಶ್ವರ್ ಎಂಬ 21 ವರ್ಷದ ಯುವಕ ತನ್ನ ತಂಗಿಗೆ ಕಿರುಕುಳ ನೀಡುತ್ತಿದ್ದ ಎಂದು ಅಮರನಾಥ್ ಕುಟುಂಬದವರು ಆರೋಪಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಮರನಾಥ್, ಆರೋಪಿ ವೆಂಕಟೇಶ್ವರ ವಿರುದ್ಧ ಜಗಳ ಮಾಡಿದ್ದ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: Crime News: ಕೆಆರ್‌ಎಸ್‌ ಹಿನ್ನೀರಿನಲ್ಲಿ ಯುವತಿಯ ಸುಟ್ಟ ಶವ ಪತ್ತೆ, ಸಜೀವ ದಹನ?

ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಬಪಟ್ಲಾ ಪೊಲೀಸ್ ಅಧಿಕಾರಿ ವಕುಲ್ ಜಿಂದಾಲ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆರೋಪಿ ವೆಂಕಟೇಶ್ವರ್ ನಿಂದ ಕಿರುಕುಳಕ್ಕೊಳಗಾದ ಕೊಲೆಯಾದ ವಿದ್ಯಾರ್ಥಿಯ ಸಹೋದರಿ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಕಠಿಣ ಪೋಕ್ಸೊ ಕಾಯ್ದೆಯಡಿ ಮತ್ತೊಂದು ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

Exit mobile version