Site icon Vistara News

Vande Bharat: ಹಸುವಿಗೆ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲು ಡಿಕ್ಕಿ ಹೊಡೆದು ವೃದ್ಧ ಸಾವು; ಛಿದ್ರವಾಯ್ತು ದನದ ದೇಹ

Vande Bharat Express Train

Chennai to Bengaluru In Just 4 Hours; Vande Bharat Train Slash Travel Time

ಆಳ್ವಾರ್​: ಹಸುವೊಂದಕ್ಕೆ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲು ಡಿಕ್ಕಿ ಹೊಡೆದ ಪರಿಣಾಮ ವೃದ್ಧನೊಬ್ಬ ಮೃತಪಟ್ಟ ಘಟನೆ ರಾಜಸ್ಥಾನದ ಆಳ್ವಾರ್​ ಜಿಲ್ಲೆಯಲ್ಲಿ ನಡೆದಿದೆ. ಅಂದಹಾಗೇ, ಆ ಹಸು ಕೂಡ ಬದುಕಿಲ್ಲ. ಅದರ ದೇಹವಂತೂ ಛಿದ್ರವಾಗಿ ಬಿದ್ದು ಹೋಗಿದೆ. ರೈಲು ನೇರವಾಗಿ ಡಿಕ್ಕಿ ಹೊಡೆದಿದ್ದು ಹಸುವಿಗೇ ಆದರೂ, ಆ ಹಸುವಿನೊಂದಿಗೆ ವೃದ್ಧರೊಬ್ಬರ ಜೀವ ಹೋಗಿದ್ದು ದುರಂತವೇ ಆಗಿದೆ.

ಬುಧವಾರ ಬೆಳಗ್ಗೆ 8.30ರ ಹೊತ್ತಿಗೆ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಕಾಳಿ ಮೋರಿ ಗೇಟ್​​ನಿಂದ ಹೊರಟಿತ್ತು. ಈ ರೈಲಿಗೆ ಹಸುವೊಂದು ಅಡ್ಡಬಂದು ಮೃತಪಟ್ಟಿದೆ. ರೈಲಿನ ಡಿಕ್ಕಿ ರಭಸಕ್ಕೆ ಹಸುವಿನ ದೇಹ ಛಿದ್ರಗೊಂಡಿದ್ದಲ್ಲದೆ, ಅದರ ದೇಹದ ಒಂದು ಭಾಗ 30 ಮೀಟರ್​ ದೂರಕ್ಕೆ ಹೋಗಿ ಬಿದ್ದಿದೆ. ಆದೇ ಮತ್ತೊಂದು ದುರಂತಕ್ಕೆ ಕಾರಣವಾಯ್ತು. ಹಳಿಯ ಪಕ್ಕ, ಅಲ್ಲೇ ಸ್ವಲ್ಪ ದೂರದಲ್ಲಿ ವೃದ್ಧರೊಬ್ಬರು ಮೂತ್ರ ವಿಸರ್ಜನೆ ಮಾಡುತ್ತಿದ್ದರು. ಹಸುವಿನ ದೇಹದ ಭಾಗ ಆ ವೃದ್ಧರಿಗೆ ಬಡಿದು ಅವರು ಕೆಳಗೆ ಬಿದ್ದಿದ್ದಾರೆ. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಬದುಕಲಿಲ್ಲ.

ಇದನ್ನೂ ಓದಿ: ‌Vande Bharat Express : ವಂದೇ ಭಾರತ್‌ ರೈಲಿನ ಸದ್ಯದ ಸರಾಸರಿ ಸ್ಪೀಡ್‌ 83 ಕಿ.ಮೀ, ಕಾರಣವೇನು?

ಈ ವೃದ್ಧನ ಹೆಸರು ಶಿವದಯಾಳ್ ಶರ್ಮಾ​ ಎಂದಾಗಿದ್ದು, ರೈಲ್ವೆ ಇಲಾಖೆಯಲ್ಲಿ ಎಲೆಕ್ಟ್ರಿಶಿಯನ್​ ಆಗಿದ್ದರು. 23ವರ್ಷಗಳ ಹಿಂದೆಯೇ ನಿವೃತ್ತರಾಗಿದ್ದರು. ಯಾರ ಸಾವು, ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂಬ ಮಾತಿದೆ. ಇಂಥ ತೀರ ಅಸಹಜ ಎನ್ನಿಸುವ ಸಾವುಗಳನ್ನು ನೋಡಿದಾಗ ಈ ಮಾತು ಅದೆಷ್ಟು ಸತ್ಯ ಎನ್ನಿಸಿಬಿಡುತ್ತದೆ. ಈ ಹಿಂದೆಯೂ ಹಲವು ಬಾರಿ ವಂದೇ ಭಾರತ್ ರೈಲುಗಳಿಗೆ ಹಸುಗಳು ಅಡ್ಡಬಂದು ಪ್ರಾಣತೆತ್ತ ಘಟನೆಗಳು ನಡೆದಿವೆ. ಅದರಲ್ಲೂ ಮುಂಬಯಿ-ಗುಜರಾತ್ ಮಾರ್ಗದಲ್ಲಿ ಇಂಥ ಪ್ರಕರಣಗಳು ಹೆಚ್ಚು. ಮುಂಬಯಿ-ಗಾಂಧಿನಗರ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲು ಉದ್ಘಾಟನೆಯಾಗಿ ಮರುದಿನವೇ ಜಾನುವಾರುವಿಗೆ ಡಿಕ್ಕಿಯಾಗಿ, ರೈಲಿಗೇ ಸಣ್ಣಮಟ್ಟದ ಹಾನಿಯಾಗಿತ್ತು.

Exit mobile version