Site icon Vistara News

ದೆಹಲಿ ಅಬಕಾರಿ ನೀತಿ ಹಗರಣ; ವೈಎಸ್​ಆರ್​ ಕಾಂಗ್ರೆಸ್ ಪಕ್ಷದ ಸಂಸದನ ಪುತ್ರನನ್ನು ಬಂಧಿಸಿದ ಇಡಿ

Delhi Liquor Policy Scam YSR Cong MP Son Arrested By ED

#image_title

ನವ ದೆಹಲಿ: ದೆಹಲಿ ಅಬಕಾರಿ ನೀತಿ ಅಕ್ರಮ ಹಗರಣ (Delhi Liquor Policy Scam) ತೆಲಂಗಾಣಕ್ಕೂ ವ್ಯಾಪಿಸಿರುವುದು ಹಳೇ ವಿಷಯ. ಅದೀಗ ಆಂಧ್ರಪ್ರದೇಶದವರೆಗೂ ಬಂದಿದೆ. ಇಲ್ಲಿನ ವೈಎಸ್​ಆರ್​ ಕಾಂಗ್ರೆಸ್ ಪಕ್ಷದ ಒಂಗೋಲ್ ಕ್ಷೇತ್ರದ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಪುತ್ರ ರಾಘವ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಕಳೆದವರ್ಷ ದೆಹಲಿಯಲ್ಲಿ ಆಪ್​ ಸರ್ಕಾರ ಜಾರಿ ಮಾಡಿದ್ದ ನೂತನ ಅಬಕಾರಿ ನೀತಿಯಲ್ಲಿ ಕೋಟ್ಯಂತರ ರೂಪಾಯಿ ಗೋಲ್​ಮಾಲ್​ ಆಗಿರುವ ಸಂಬಂಧ ಸಿಬಿಐ ಮತ್ತು ಇಡಿ ತನಿಖಾದಳಗಳು ತನಿಖೆ ನಡೆಸುತ್ತಿದ್ದು, ಈಗಾಗಲೇ ಹಲವು ಮದ್ಯ ಉದ್ಯಮಿಗಳು, ಮೀಡಿಯೇಟರ್​​ಗಳನ್ನು ಬಂಧಿಸಿವೆ. ದೆಹಲಿ ಅಬಕಾರಿ ನೀತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಇಂಡೋಸ್ಪಿರಿಟ್​ ಪಾನೀಯ ಕಂಪನಿಯ ಸಂಸ್ಥಾಪಕ, ಮಾಲೀಕ ಸಮೀರ್​ ಮಹೇಂದ್ರು ಅವರನ್ನು ಈಗಾಗಲೇ ಇಡಿ ಬಂಧಿಸಿದೆ. ಹಾಗೇ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್​ ಪುತ್ರಿ ಕೆ. ಕವಿತಾ ಅವರನ್ನು ಸಿಬಿಐ ಮತ್ತು ಇಡಿ ತನಿಖಾದಳಗಳು ಈಗಾಗಲೇ ವಿಚಾರಣೆಗೆ ಒಳಪಡಿಸಿವೆ. ಹಾಗೇ, ‘ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಲಿಕ್ಕರ್​ ಉದ್ಯಮದಲ್ಲಿ ಹಿಡಿತ ಸಾಧಿಸಲು ‘ಸೌತ್​ ಗ್ರೂಪ್​​’ ನಿಂದ ಆಮ್​ ಆದ್ಮಿ ಪಕ್ಷಕ್ಕೆ 100 ಕೋಟಿ ರೂಪಾಯಿ ಲಂಚ ಹೋಗಿದೆ. ಈ ಗ್ರೂಪ್​​ನಲ್ಲಿ ಕೆ. ಕವಿತಾ ಒಬ್ಬರು ಹೌದು. ಇನ್ನಿಬ್ಬರು ಅರಬಿಂದೋ ಔಷಧ ಕಂಪನಿಯ ಶರತ್​ ಚಂದ್ರ ರೆಡ್ಡಿ ಮತ್ತು ವೈಎಸ್​ಆರ್​ ಕಾಂಗ್ರೆಸ್​ ಸಂಸದ ಮಾಗುಂಟ ಶ್ರೀನಿವಾಸ ರೆಡ್ಡಿ. ಇವರೆಲ್ಲರೂ ಆಪ್​​ನ ಪ್ರತಿನಿಧಿ ವಿಜಯ್​ ನಾಯರ್​​ಗೆ ಹಣ ಕೊಟ್ಟಿದ್ದಾರೆ’ ಎಂದು ಇಡಿ ಮೊದಲ ಚಾರ್ಜ್​ಶೀಟ್ ಸಲ್ಲಿಸಿತ್ತು.

ಇದನ್ನೂ ಓದಿ: Delhi Liquor Policy Scam: ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಕವಿತಾ ಅವರ ಮಾಜಿ ಆಡಿಟರ್‌ನನ್ನು ಬಂಧಿಸಿದ ಸಿಬಿಐ

ಅದಾದ ಬಳಿಕ ಎರಡನೇ ಚಾರ್ಜ್​ಶೀಟ್​ ಸಲ್ಲಿಸಿದ್ದ ಇ.ಡಿ. ಅಧಿಕಾರಿಗಳು, ‘ಇಂಡೋಸ್ಪಿರಿಟ್​ ಕಂಪನಿಯ ನಿಜವಾದ ಮಾಲೀಕರು ಕೆ. ಕವಿತಾ ಮತ್ತು ರಾಘವ್’ ಎಂದು ಹೇಳಿದ್ದರು. ‘ಬಂಧಿತನಾಗಿರುವ ಮದ್ಯ ಉದ್ಯಮಿ ಅರುಣ್​ ಪಿಳ್ಳೈ ಹೇಳಿಕೆ ನೀಡಿ, ಕೆ.ಕವಿತಾ ಮತ್ತು ಆಪ್​ ಮಧ್ಯೆ ಒಪ್ಪಂದ ಇರುವ ಬಗ್ಗೆ ಮೊದಲ ಬಾರಿಗೆ ಬಾಯ್ಬಿಟ್ಟಿದ್ದ. ಅದರ ಆಧಾರದ ಮೇಲೆಯೇ ಕೆ.ಕವಿತಾಗೆ ಸಮನ್ಸ್​ ನೀಡಿ, ವಿಚಾರಣೆಗೆ ಒಳಪಡಿಸಲಾಗಿತ್ತು. ತನಿಖಾದಳಗಳು ಹೀಗೆ ಒಬ್ಬೊಬ್ಬರ ವಿಚಾರಣೆ ನಡೆಸಿದಾಗಲೂ ಸಿಗುವ ಮಾಹಿತಿಯನ್ನಾಧರಿಸಿ ತನಿಖೆಯನ್ನು ತೀವ್ರಗೊಳಿಸುತ್ತಿದೆ. ಈ ವಾರದಲ್ಲಿ ರಾಘವ್ ಸೇರಿ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ.

Exit mobile version