Site icon Vistara News

Delhi Liquor Scam: ಸಿಎಂ ಕಾಲಬುಡಕ್ಕೆ ಬಂದ ಅಬಕಾರಿ ಅಕ್ರಮ; ಆಪ್ತಸಹಾಯಕನಿಗೆ ಇಡಿ ಸಮನ್ಸ್​​

Delhi liquor scam ED summoned personal assistant Of Delhi Chief Minister

#image_title

ನವ ದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ (Delhi Liquor Scam) ತನಿಖೆ ನಡೆಸುತ್ತಿರುವ ಇ.ಡಿ. ಮತ್ತು ಸಿಬಿಐ ತನಿಖಾದಗಳು ಈಗಾಗಲೇ ದೆಹಲಿ ಉಪಮುಖ್ಯಮಂತ್ರಿ, ಅಬಕಾರಿ ಇಲಾಖೆ ಉಸ್ತುವಾರಿ ಮನೀಶ್​ ಸಿಸೋಡಿಯಾ, ತೆಲಂಗಾಣ ಸಿಎಂ ಕೆ.ಚಂದ್ರಶೇಖರ್​ ರಾವ್​ ಪುತ್ರಿ ಕವಿತಾ ಸೇರಿ ಹಲವರನ್ನು ವಿಚಾರಣೆಗೆ ಒಳಪಡಿಸಿವೆ. ಅಷ್ಟೇ ಅಲ್ಲ, ದೆಹಲಿಯ ಪ್ರಮುಖ ಲಿಕ್ಕರ್ ಉದ್ಯಮಿಗಳ ಬಂಧನವೂ ಆಗಿದೆ. ಈಗ ಮತ್ತೊಂದು ಹೊಸ ಬೆಳವಣಿಗೆಯಲ್ಲಿ ದೆಹಲಿ ಅಬಕಾರಿ ಅಕ್ರಮಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರ ಆಪ್ತ ಸಹಾಯಕ (Personal Assistant)ನಿಗೆ ಇಡಿ ಸಮನ್ಸ್​ ನೀಡಿದೆ.

ದೆಹಲಿ ಅಬಕಾರಿ ಅಕ್ರಮ ಹಗರಣದಡಿ ಈಗಾಗಲೇ ಮನೀಶ್​ ಸಿಸೋಡಿಯಾ ವಿಚಾರಣೆ ನಡೆದಿದೆ. ಅವರ ಮನೆ-ಕಚೇರಿಗಳಲ್ಲಿ ಶೋಧ ಕಾರ್ಯವೂ ನಡೆದಿತ್ತು. ಆದರೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಇತ್ತೀಚೆಗೆ ಮತ್ತೆ ಸಿಬಿಐ ಸಮನ್ಸ್​ ನೀಡಿದೆ. ಅದರ ಬೆನ್ನಲ್ಲೇ ಇಡಿ ಮತ್ತೊಂದು ಪೂರಕ ಚಾರ್ಜ್​ಶೀಟ್​ ಸಲ್ಲಿಸಿದೆ. ಮುಖ್ಯಮಂತ್ರಿಯ ಆಪ್ತ ಸಹಾಯಕನನ್ನು ವಿಚಾರಣೆಗೆ ಕರೆದಿದೆ.

ಇದನ್ನೂ ಓದಿ: Delhi Liquor Scam: ದೆಹಲಿ ಅಬಕಾರಿ ನೀತಿ ಅಕ್ರಮ; ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾಗೆ ಮತ್ತೆ ಸಿಬಿಐ ಸಮನ್ಸ್​

ಅದಕ್ಕೂ ಮೊದಲು ಒಂದು ಚಾರ್ಜ್​ಶೀಟ್ ಸಲ್ಲಿಸಿದ್ದ ಇಡಿ, ‘ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಲಿಕ್ಕರ್​ ಉದ್ಯಮದಲ್ಲಿ ಹಿಡಿತ ಸಾಧಿಸಲು ‘ಸೌತ್​ ಗ್ರೂಪ್​​’ ನಿಂದ ಆಮ್​ ಆದ್ಮಿ ಪಕ್ಷಕ್ಕೆ 100 ಕೋಟಿ ರೂಪಾಯಿ ಲಂಚ ಹೋಗಿದೆ. ಈ ಗ್ರೂಪ್​​ನಲ್ಲಿ ತೆಲಂಗಾಣ ಸಿಎಂ ಪುತ್ರಿ ಕೆ. ಕವಿತಾ ಒಬ್ಬರು ಹೌದು. ಇನ್ನಿಬ್ಬರು ಅರಬಿಂದೋ ಔಷಧ ಕಂಪನಿಯ ಶರತ್​ ಚಂದ್ರ ರೆಡ್ಡಿ ಮತ್ತು ವೈಎಸ್​ಆರ್​ ಕಾಂಗ್ರೆಸ್​ ಸಂಸದ ಮಾಗುಂಟ ಶ್ರೀನಿವಾಸ ರೆಡ್ಡಿ. ಇವರೆಲ್ಲರೂ ಆಪ್​​ನ ಪ್ರತಿನಿಧಿ ವಿಜಯ್​ ನಾಯರ್​​ಗೆ ಹಣ ಕೊಟ್ಟಿದ್ದಾರೆ’ ಎಂದು ಹೇಳಿತ್ತು. ಈ ಪ್ರಕರಣದಡಿ ವೈಎಸ್​ಆರ್​ ಕಾಂಗ್ರೆಸ್ ಪಕ್ಷದ ಒಂಗೋಲ್ ಕ್ಷೇತ್ರದ ಸಂಸದ ಮಾಗುಂಟ ಶ್ರೀನಿವಾಸುಲು ರೆಡ್ಡಿ ಪುತ್ರ ರಾಘವ್ ಕೂಡ ಬಂಧಿತರಾಗಿದ್ದಾರೆ.

Exit mobile version