Site icon Vistara News

ರೈಲಿನಲ್ಲಿ ಮಹಿಳೆಯ ತಲೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಟಿಟಿಇ; ಕುಡಿದಿದ್ದು ಹೆಚ್ಚಾಗಿ ಮಾಡಿದ ಅವಾಂತರ

Drunk Train Ticket Checker

#image_title

ಅಮೃತ್​ಸರ್​: ಇತ್ತೀಚೆಗೆ ಯುಎಸ್​ನಿಂದ ದೆಹಲಿಗೆ ಬರುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ ಶಂಕರ್ ಮಿಶ್ರಾ ಎಂಬಾತ ಕಂಠಪೂರ್ತಿ ಕುಡಿದು, ತನ್ನ ಸಹಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ನಮ್ಮ ರಾಜ್ಯದಲ್ಲಿ ವಿಜಯಪುರದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್​​ನಲ್ಲಿ, ಯುವತಿಯೊಬ್ಬಳ ಆಸನದ ಮೇಲೆ ಕುಡುಕನೊಬ್ಬ ಮೂತ್ರ ವಿಸರ್ಜಿಸಿದ್ದ. ಈಗ ಇಂಥದ್ದೇ ಮತ್ತೊಂದು ಘಟನೆ ವರದಿಯಾಗಿದೆ. ಆದರೆ ಈ ಬಾರಿ ರೈಲಿನಲ್ಲಿ..

ಪಂಜಾಬ್​​ನ ಅಮೃತ್​ಸರ್​ದಿಂದ ಕೋಲ್ಕತ್ತಕ್ಕೆ ಹೋಗುತ್ತಿದ್ದ ಅಕಾಲ್ ತಖ್ತ್ ಎಕ್ಸ್​ಪ್ರೆಸ್​ ರೈಲಿನಲ್ಲಿ ಟಿಕೆಟ್​ ಪರೀಕ್ಷಕ (ಟಿಟಿಇ) ಕುಡಿದ ಅಮಲಿನಲ್ಲಿ ಮಹಿಳೆಯೊಬ್ಬರ ತಲೆಯ ಮೇಲೆ ಮೂತ್ರ ವಿಸರ್ಜಿಸಿದ್ದಾನೆ. ಮಹಿಳೆ ತನ್ನ ಪತಿ ರಾಜೇಶ್​ ಕುಮಾರ್​ ಜತೆ ಪ್ರಯಾಣ ಮಾಡುತ್ತಿದ್ದರು. ಇವರು ಅಮೃತ್​ಸರ್​ ಮೂಲದವರಾಗಿದ್ದು, ಕೋಲ್ಕತ್ತಕ್ಕೆ ಹೋಗುತ್ತಿದ್ದರು. ರೈಲಿನ ಕೋಚ್​ ಎ1ರಲ್ಲಿ ಇದ್ದರು. ಭಾನುವಾರ ಮಧ್ಯರಾತ್ರಿ ಹೊತ್ತಿಗೆ ಅಲ್ಲಿಗೆ ಬಂದ ಟಿಟಿಇ, ಮಹಿಳೆಯ ತಲೆ ಮೇಲೆ ಮೂತ್ರ ವಿಸರ್ಜಿಸಿದ್ದಾನೆ.

ಇದನ್ನೂ ಓದಿ: ಮಕ್ಕಳಿಗೆ ಕೊಟ್ಟ ಮಾತು ನೆರವೇರಿಸಿದ ಸರ್ಕಾರಿ ಶಾಲೆ ಪ್ರಾಂಶುಪಾಲ; ನಾಲ್ವರು ವಿದ್ಯಾರ್ಥಿನಿಯರಿಗೆ ಖರ್ಚಿಲ್ಲದೆ ವಿಮಾನ ಪ್ರಯಾಣ!

ತಲೆ ಮೇಲೆ ಮೂತ್ರ ಬೀಳುತ್ತಿದ್ದಂತೆ ಮಹಿಳೆ ಕೂಗಿಕೊಂಡಿದ್ದಾರೆ. ಆ ಗದ್ದಲ ಕೇಳಿ ಅಕ್ಕಪಕ್ಕ ಇದ್ದ ಎಲ್ಲ ಪ್ರಯಾಣಿಕರೂ ಅಲ್ಲಿ ಸೇರಿದ್ದರು. ಅಮಲೇರಿದ ಸ್ಥಿತಿಯಲ್ಲಿದ್ದ ಟಿಟಿಇಯನ್ನು ಹಿಡಿದುಕೊಂಡಿದ್ದಾರೆ. ಈತನನ್ನು ಮುನ್ನಾ ಕುಮಾರ್​ ಎಂದು ಗುರುತಿಸಲಾಗಿದ್ದು, ಮೂಲತಃ ಬಿಹಾರದವನು ಎನ್ನಲಾಗಿದೆ. ರೈಲು ಮುಂದಿನ ಸ್ಟೇಶನ್​​ನಲ್ಲಿ ನಿಂತಾಗ ಅವನನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಲಾಗಿದೆ.

Exit mobile version