Site icon Vistara News

ರಾಷ್ಟ್ರಪತಿ ದ್ರೌಪದಿ ಮುರ್ಮು ಪಾದ ಮುಟ್ಟಿ ನಮಿಸಲು ಮುಂದಾಗಿದ್ದ ಸರ್ಕಾರಿ ಎಂಜಿನಿಯರ್​ ಅಮಾನತು

murmu

ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದಿದ್ದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪಾದ ಸ್ಪರ್ಶಿಸಿ ನಮಿಸಲು ಪ್ರಯತ್ನಿಸಿದ್ದ ಅಲ್ಲಿನ ಸರ್ಕಾರಿ ಎಂಜಿನಿಯರ್​​ ಒಬ್ಬರನ್ನು ಅಮಾನತು ಮಾಡಲಾಗಿದೆ. ಸಾರ್ವಜನಿಕ ಆರೋಗ್ಯ ಎಂಜಿನಿಯರ್​ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಿರಿಯ ಮಹಿಳಾ ಎಂಜಿನಿಯರ್​ ಅಂಬಾ ಸಿಯೋಲ್​ ಹೀಗೆ ಅಮಾನತುಗೊಂಡವರಾಗಿದ್ದಾರೆ.

ಜನವರಿ 4ರಂದು ರಾಜಸ್ಥಾನದ ರೊಹೆಟ್​​ನಲ್ಲಿ ಸ್ಕೌಟ್​-ಗೈಡ್​​ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಂಡಿದ್ದರು. ಅದರಲ್ಲಿ ಅಂಬಾ ಅವರು ನೀರಿನ ವ್ಯವಸ್ಥೆ ಉಸ್ತುವಾರಿ ನೋಡಿಕೊಳ್ಳಲು ನಿಯೋಜಿತರಾಗಿದ್ದರು. ಆದರೆ ರಾಷ್ಟ್ರಪತಿಯವರನ್ನು ನೋಡುತ್ತಿದ್ದಂತೆಯೇ ಅಂಬಾ ಸಿಯೋಲ್​ ಅವರ ಬಳಿ ಹೋಗಿ, ಪಾದ ಸ್ಪರ್ಶಿಸಿ ನಮಸ್ಕಾರ ಮಾಡಲು ಮುಂದಾಗಿದ್ದಾರೆ. ಬಳಿಕ ರಾಷ್ಟ್ರಪತಿಯವರ ಭದ್ರತಾ ಸಿಬ್ಬಂದಿಯಿಂದ ತಡೆಯಲ್ಪಟ್ಟಿದ್ದಾರೆ.

ಅಂಬಾ ಸಿಯೋಲ್​ ಅವರು ರಾಷ್ಟ್ರಪತಿಯವರ ಭದ್ರತಾ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಗೃಹ ಇಲಾಖೆಯ ಸೂಚನೆ ಮೇರೆಗೆ ಆಕೆಯನ್ನು ಅಮಾನತುಗೊಳಿಸಲಾಗಿದೆ ಎಂದು ಸಾರ್ವಜನಿಕ ಆರೋಗ್ಯ ಇಂಜಿನಿಯರ್​ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಭದ್ರತಾ ವೈಫಲ್ಯ ಆಗಿದ್ದಲ್ಲ, ರಾಹುಲ್​ ಗಾಂಧಿಯೇ ನಿಯಮ ಉಲ್ಲಂಘಿಸಿದ್ದಾರೆ; ಪ್ರತಿಕ್ರಿಯಾ ಪತ್ರ ಬರೆದ ಸಿಆರ್​ಪಿಎಫ್​​

Exit mobile version