Site icon Vistara News

Cow Hug Day: ಬಿಜೆಪಿಗರಿಗೆ ಗೌತಮ್​ ಅದಾನಿಯೇ ಪವಿತ್ರ ಗೋವು ಎಂದು ವ್ಯಂಗ್ಯವಾಡಿದ ಸಂಜಯ್ ರಾವತ್​

Sanjay Raut

BJP has kidnapped Lord Ram, says Sanjay Raut on invitation for consecration ceremony of Ram Mandir

ನವ ದೆಹಲಿ: ಪ್ರತಿವರ್ಷ ಫೆಬ್ರವರಿ 14ರಂದು ಪ್ರೇಮಿಗಳ ದಿನವೆಂದು ಆಚರಿಸಲಾಗುತ್ತದೆ. ಆದರೆ ಈ ಸಲದಿಂದ ಭಾರತದಲ್ಲಿ ಫೆ.14ನ್ನು ‘ಗೋವುಗಳನ್ನು ಅಪ್ಪಿಕೊಳ್ಳುವ ದಿನ’ (Cow Hug Day) ಎಂದು ಆಚರಿಸುವಂತೆ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅನಿಮಲ್‌ ವೆಲ್‌ಫೇರ್‌ ಬೋರ್ಡ್‌ (Animal Welfare Board) ಅಧಿಸೂಚನೆ ಹೊರಡಿಸಿದೆ.

ಇದೀಗ ಶಿವಸೇನೆ ನಾಯಕ ಸಂಜಯ್​ ರಾವತ್​ ಅವರು ಈ ವಿಷಯವನ್ನು ಉದ್ಯಮಿ ಗೌತಮ್​ ಅದಾನಿಯವರಿಗೆ ಲಿಂಕ್​ ಮಾಡಿಕೊಂಡು, ಕೇಂದ್ರ ಸರ್ಕಾರ ಮತ್ತು ಬಿಜೆಪಿ ಪಕ್ಷವನ್ನು ವ್ಯಂಗ್ಯ ಮಾಡಿದ್ದಾರೆ. ಬಿಜೆಪಿಗರ ಪಾಲಿಗೆ ಗೌತಮ್​ ಅದಾನಿಯವರೇ ಪವಿತ್ರ ಗೋವು ಎಂದು ಟೀಕಿಸಿದ್ದಾರೆ. ‘ಬಿಜೆಪಿಯವರು ತಮ್ಮ ಪವಿತ್ರ ಗೋವಾದ ಗೌತಮ್​ ಅದಾನಿಯನ್ನು ಅಪ್ಪಿಕೊಂಡು, ಉಳಿದ ಹಸುಗಳನ್ನೆಲ್ಲ ನಮಗೆ ಬಿಟ್ಟಿದ್ದಾರೆ. ನಾವು ಫೆ.14ರ ಪ್ರೇಮಿಗಳ ದಿನದಂದು ಬಿಜೆಪಿಯವರು ಬಿಟ್ಟ ಹಸುಗಳನ್ನು ತಬ್ಬಿಕೊಳ್ಳಬೇಕು’ ಎಂದು ಹೇಳಿರುವ ಸಂಜಯ್​ ರಾವತ್ ‘ಗೋಮಾತೆಯನ್ನು ಪೂಜಿಸಲು, ಅದನ್ನು ಅಪ್ಪಿಕೊಳ್ಳಲು ಯಾವುದೇ ಒಂದು ನಿರ್ದಿಷ್ಟ ದಿನ ಬೇಕಿಲ್ಲ’ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: Cow Hug Day: ಪ್ರೇಮಿಗಳ ದಿನದಂದು ‘ಗೋವುಗಳನ್ನು ಅಪ್ಪುವ ದಿನ’ ಆಚರಿಸಿ, ಅನಿಮಲ್‌ ವೆಲ್‌ಫೇರ್‌ ಬೋರ್ಡ್‌ ನೋಟಿಸ್

ಗೌತಮ್​ ಅದಾನಿ ಷೇರು ಕುಸಿತವನ್ನು ಪ್ರತಿಪಕ್ಷಗಳು ಆರ್ಥಿಕ ಹಗರಣ ಎಂದು ಕರೆದಿವೆ. ಕಾಂಗ್ರೆಸ್​, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಮತ್ತಿತರ ಪಕ್ಷಗಳ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಜಂಟಿ ಸಂಸದೀಯ ಸಮಿತಿಯಿಂದ ಅಥವಾ ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ಮೇಲ್ವಿಚಾರಣೆಯಲ್ಲಿ, ಸಮಿತಿ ರಚಿಸಿ ತನಿಖೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಬಜೆಟ್​ ಅಧಿವೇಶನದಲ್ಲೂ ಕೂಡ ಇದೇ ವಿಷಯವನ್ನೇ ಇಟ್ಟುಕೊಂಡು ಕೇಂದ್ರಸರ್ಕಾರ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.

Exit mobile version