Site icon Vistara News

ಖಡ್ಗದಿಂದ ಕೇಕ್​ ಕತ್ತರಿಸಿದ ಅತ್ಯಾಚಾರ ಆರೋಪಿ ಗುರ್ಮೀತ್​ ರಾಮ್​ ರಹೀಮ್​; ಪದೇಪದೆ ಪೆರೋಲ್​ ಸಿಗ್ತಿರೋದು ಹೇಗೆ?

Gurmeet Ram Rahim Cut Cake cutting a cake with a sword

ಹರಿಯಾಣದ ಸಿರ್ಸಾದಲ್ಲಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್​ ರಾಮ್​ ರಹೀಮ್​​ನ ವಿವಾದಾತ್ಮಕ ವಿಡಿಯೊವೊಂದು ವೈರಲ್​ ಆಗಿದೆ. ಈತ ಹಲವು ಅತ್ಯಾಚಾರ ಮತ್ತು ಪತ್ರಕರ್ತನೊಬ್ಬನ ಕೊಲೆ ಪ್ರಕರಣದಲ್ಲಿ ಜೀವಾವಧಿ ಜೈಲು ಶಿಕ್ಷೆ ಪಡೆದಿರುವ ರಾಮ್​ ರಹೀಮ್​ ಸದ್ಯ ಪೆರೋಲ್​ ಆಧಾರದಲ್ಲಿ ಹೊರಗಿದ್ದಾನೆ. ಹೀಗೆ ಜೈಲಿಂದ ಹೊರಗೆ ಬರುತ್ತಿದ್ದಂತೆ ಆತ ಖಡ್ಗದಲ್ಲಿ ಕೇಕ್​ ಕತ್ತರಿಸಿ, ಭರ್ಜರಿ ಸಂಭ್ರಮ ಆಚರಣೆ ಮಾಡಿದ್ದಾಗಿ ವರದಿಯಾಗಿದೆ. ಹಾಗೇ ಫೋಟೋಗಳು-ವಿಡಿಯೊ ವೈರಲ್ ಆಗಿವೆ.

ರಾಮ್​ ರಹೀಮ್ 2017ರಿಂದಲೂ ರೋಹ್ಟಕ್​​​ನ ಸುನಾರಿಯಾ ಜೈಲಿನಲ್ಲಿಯೇ ಇದ್ದಾನೆ. ಆಗಾಗ ಆತ ಪೆರೋಲ್​ ಮೇಲೆ ಹೊರಗೆ ಕೂಡ ಬರುತ್ತಾನೆ. ಹಾಗೇ​ ಶನಿವಾರ (ಜನವರಿ 21)ದಂದು ಕೂಡ ಅವನಿಗೆ 40 ದಿನಗಳ ಪೆರೋಲ್​ ಸಿಕ್ಕಿದೆ. ಹೊರಗೆ ಬರುತ್ತಿದ್ದಂತೆ ಆತ ಫುಲ್ ಖುಷಿಯಿಂದ ಬಾಗ್‌ಪತ್‌ನಲ್ಲಿರುವ ತನ್ನ ಬರ್ನಾವಾ ಆಶ್ರಮ ಖಡ್ಗದಲ್ಲಿ ಕೇಕ್​ ಕತ್ತರಿಸಿದ್ದಾನೆ. ಇದನ್ನು ನೋಡಿದ ನೆಟ್ಟಿಗರು, ರಾಜಕೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥ ಅತ್ಯಾಚಾರ-ಕೊಲೆ ಆರೋಪಿಗೆ ಅದು ಹೇಗೆ ಹರಿಯಾಣ ಸರ್ಕಾರ ಪದೇಪದೆ ಪೆರೋಲ್​ ಕೊಡುತ್ತದೆ ಎಂದೂ ಅನೇಕರು ಪ್ರಶ್ನಿಸಿದ್ದಾರೆ.

ಈ ಹಿಂದೆ 2022ರ ನವೆಂಬರ್​​ನಲ್ಲಿಯೂ ಒಮ್ಮೆ ಗುರ್ಮೀತ್​ ರಾಮ್​ ರಹೀಮ್​​ಗೆ ಪೆರೋಲ್​ ಸಿಕ್ಕಿತ್ತು. ಆಗ ಹೊರಗಡೆ ಬಂದಿದ್ದ ಆತ ಸತ್ಸಂಗದ ಹೆಸರಲ್ಲಿ ಶಾಲಾ ಮಕ್ಕಳನ್ನೆಲ್ಲ ಸೇರಿಸಿಕೊಂಡು, ಅವರಿಗೆ ದೊಡ್ಡ ಪರದೆಯ ಮೇಲೆ ಕೊಲೆ-ಅತ್ಯಾಚಾರದ ವಿಡಿಯೊ ತುಣುಕುಗಳನ್ನು ತೋರಿಸಿದ್ದ ಎಂದೂ ಹೇಳಲಾಗಿತ್ತು.

Exit mobile version