Site icon Vistara News

Haryana Crime | ವ್ಯಕ್ತಿಯ ಕೈ ಕತ್ತರಿಸಿ, ಅದನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದ ದುಷ್ಕರ್ಮಿಗಳು!

Crime Image

ಕುರುಕ್ಷೇತ್ರ: ದುಷ್ಕರ್ಮಿಗಳ ಗುಂಪೊಂದು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ, ಆತನ ಕೈ ಕತ್ತರಿಸಿ ಅದನ್ನು ತಮ್ಮೊಂದಿಗೆ ತೆಗೆದುಕೊಂಡ ಹೋದ ಭೀಭತ್ಸ ಘಟನೆ ಹರ್ಯಾಣದ ಕುರುಕ್ಷೇತ್ರದಲ್ಲಿ ಸೋಮವಾರ ಸಾಯಂಕಾಲ ನಡೆದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಜುಗ್ನು ಎಂದು ಪೊಲೀಸರು ಗುರುತಿಸಿದ್ದು, ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ(Haryana Crime).

ಕೈ ಕಳೆದುಕೊಡಿರುವ ಜುಗ್ನು ಅವರನ್ನು ಲೋಕನಾಯಕ ಜಯ ಪ್ರಕಾಶ್ ನಾರಾಯಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಗಂಭೀರ ಸ್ಥಿತಿಯಲ್ಲಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಕ್ಷೇತ್ರ ಹವೇಲಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳನ್ನು ಪತ್ತೆ ಹಚ್ಚುವ ಸಂಬಂಧ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ.

ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಹತ್ತರಿಂದ ಹನ್ನೆರಡು ಜನರಿದ್ದ ಗುಂಪು ಕುರುಕ್ಷೇತ್ರದ ಹವೇಲಿಯನ್ನು ಪ್ರವೇಶಿಸಿದೆ ಮತ್ತು ಜುಗ್ನು ಮೇಲೆ ಸಿಕ್ಕಾಪಟ್ಟೆ ಹಲ್ಲೆ ಮಾಡಿದೆ. ಬಳಿಕ ಆತನ ಕೈ ಕತ್ತರಿಸಿದೆ. ಅಷ್ಟಕ್ಕೆ ಸುಮ್ಮನಾಗಿದೆ, ಕತ್ತರಿಸಿದ ಕೈಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದೆ. ಈ ಘಟನೆಯ ಹಿನ್ನೆಲೆಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಕೂಡಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಡಿಎಸ್‌ಪಿ ರಾಮದತ್ ನೈನ್ ಹೇಳಿದ್ದಾರೆ.

ಇದನ್ನೂ ಓದಿ | Madhya Pradesh | ಬಿಜೆಪಿಯಿಂದ ಅಮಾನತಾದ ನಾಯಕ, ಕೊಲೆ ಆರೋಪಿಯ ಹೋಟೆಲ್ ನೆಲಸಮ!

Exit mobile version