Site icon Vistara News

ಹತ್ರಾಸ್ ದಲಿತ ಯುವತಿ​ ಅತ್ಯಾಚಾರ ಪ್ರಕರಣ; ನಾಲ್ವರು ಆರೋಪಿಗಳಲ್ಲಿ ಮೂವರಿಗೆ ಖುಲಾಸೆ, ಒಬ್ಬನಿಗೆ ಮಾತ್ರ ಶಿಕ್ಷೆ

Hathras gangrape Case 3 accused acquitted by Court

#image_title

ನವ ದೆಹಲಿ: 2020ರಲ್ಲಿ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದಿದ್ದ ದಲಿತ ಯುವತಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ (Hathras Case) ಆರೋಪಿಗಳಾಗಿ ಜೈಲು ಸೇರಿದ್ದ ಮೇಲ್ಜಾತಿಯ ನಾಲ್ವರಲ್ಲಿ, ಪ್ರಮುಖ ಆರೋಪಿ ಸಂದೀಪ್​ ಸಿಸೋಡಿಯಾನೊಬ್ಬನನ್ನು ಅಪರಾಧಿ ಎಂದು ಪರಿಗಣಿಸಿರುವ ನ್ಯಾಯಾಲಯ, ಉಳಿದ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ.

ಅದರಲ್ಲಿ ಸಂದೀಪ್​ಗೆ ಕೂಡ ಎಸ್​ಸಿ/ಎಸ್​ಟಿ ಕಾಯ್ದೆ (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧ ದೌರ್ಜನ್ಯ ಮತ್ತು ದ್ವೇಷದ ಅಪರಾಧಗಳನ್ನು ತಡೆಗಟ್ಟಲು ಇರುವ ಕಾಯ್ದೆ)ಯಡಿ ಶಿಕ್ಷೆ ವಿಧಿಸಲಾಗಿದೆ ಹೊರತು ಅತ್ಯಾಚಾರಕ್ಕೆ ಸಂಬಂಧಪಟ್ಟ ಕೇಸ್​ ಹಾಕಲಾಗಿಲ್ಲ. ಈ ಹತ್ರಾಸ್​ ಯುವತಿ ಅತ್ಯಾಚಾರ ಪ್ರಕರಣದಲ್ಲಿ ಈಗ ಮೂವರನ್ನು ಖುಲಾಸೆಗೊಳಿಸಿದೆ. ಒಬ್ಬನಿಗೆ ಶಿಕ್ಷೆ ನೀಡಿದ್ದು, ಅದರಲ್ಲೂ ರೇಪ್​ ಕೇಸ್​ ದಾಖಲಿಸದೆ ಇರುವುದು, ಸಿಎಂ ಯೋಗಿ ಆದಿತ್ಯನಾಥ್​ ಸರ್ಕಾರದ ವಿರುದ್ಧ ಟೀಕೆಗೆ ಕಾರಣವಾಗಿದೆ. ಪ್ರತಿಪಕ್ಷಗಳು ಈ ವಿಷಯ ಇಟ್ಟುಕೊಂಡು ಹರಿಹಾಯುತ್ತಿವೆ. ಈ ಕೇಸ್​​ನಲ್ಲಿ ಖುಲಾಸೆಗೊಂಡವರ ಹೆಸರು ರವಿ, ರಾಮು ಮತ್ತು ಲವ್​ಕುಶ್​.

ಇದನ್ನೂ ಓದಿ: Prayagraj Encounter: ಉತ್ತರ ಪ್ರದೇಶದಲ್ಲಿ ಉಮೇಶ್‌ ಪಾಲ್‌ ಹತ್ಯೆ ಆರೋಪಿ ಅರ್ಬಾಜ್‌ ಖಾನ್‌ ಎನ್‌ಕೌಂಟರ್‌

2020ರಲ್ಲಿ ಉತ್ತರ ಪ್ರದೇಶದ ಹತ್ರಾಸ್​​ನಲ್ಲಿ ನಡೆದಿದ್ದ ಅತ್ಯಾಚಾರ ದೇಶಾದ್ಯಂತವಷ್ಟೇ ಅಲ್ಲ, ಜಾಗತಿಕವಾಗಿಯೂ ಸುದ್ದಿಯಾಗಿತ್ತು. 20ವರ್ಷದ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ, ಆಕೆಗೆ ಥಳಿಸಲಾಗಿತ್ತು. ಆಸ್ಪತ್ರೆ ಸೇರಿದ್ದ ಅವಳು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಈ ಕೇಸ್​ನ್ನು ಅಲಹಾಬಾದ್ ಹೈಕೋರ್ಟ್ ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಅದಾದ ಬಳಿಕ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. 2020ರ ಡಿಸೆಂಬರ್​ನಲ್ಲಿ ಸಿಬಿಐ ಈ ನಾಲ್ವರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿತ್ತು.

Exit mobile version