Site icon Vistara News

15-16 ವಯಸ್ಸಿನ ಹುಡುಗಿಯರಿಗೆ ದಿ ಕೇರಳ ಸ್ಟೋರಿ ವಿಶೇಷ ಪ್ರದರ್ಶನ ಏರ್ಪಡಿಸಿ; ಅರವಿಂದ್​ ಕ್ರೇಜಿವಾಲ್​ಗೆ ಬಿಜೆಪಿ ಪತ್ರ

Hold special screenings of The Kerala Story for girls Says Delhi BJP Unit

#image_title

ದೆಹಲಿಯಲ್ಲಿ ದಿ ಕೇರಳ ಸ್ಟೋರಿ ಸಿನಿಮಾ (The Kerala story)ವನ್ನು ತೆರಿಗೆ ಮುಕ್ತ ಮಾಡುವಂತೆ ಬಿಜೆಪಿ ದೆಹಲಿ ಘಟಕ, ಆಮ್​ ಆದ್ಮಿ ಪಕ್ಷದ ಸರ್ಕಾರವನ್ನು ಒತ್ತಾಯಿಸಿದೆ. ‘ದೆಹಲಿಯಲ್ಲಿ ಸಿನಿಮಾ ತೆರಿಗೆ ಮುಕ್ತವಾಗಬೇಕು ಮತ್ತು 15-16ನೇ ವಯಸ್ಸಿನ ಹುಡುಗಿಯರಿಗಾಗಿ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Chief Minister Arvind Kejriwal)​ಗೆ ನಾವೆಲ್ಲ ಸೇರಿ ಪತ್ರ ಬರೆದಿದ್ದೇವೆ ಎಂದು ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್​ ಕಪೂರ್ ತಿಳಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರು ಸಿನಿಮಾವನ್ನು ನೋಡಬೇಕು. ತೆರಿಗೆ ಮುಕ್ತ ಮಾಡುವ ಮೂಲಕ ಸಿನಿಮಾವನ್ನು ಎಲ್ಲರೂ ನೋಡುವಂತೆ ಉತ್ತೇಜಿಸಬೇಕು. ದಿ ಕೇರಳ ಸ್ಟೋರಿ ಸಿನಿಮಾಕ್ಕೆ ಸೆನ್ಸಾರ್ ಬೋರ್ಡ್​​ನಿಂದ ಎ ಸರ್ಟಿಫಿಕೇಟ್ ಸಿಕ್ಕಿದೆ. ಅಂದರೆ 18ವರ್ಷ ಮೇಲ್ಪಟ್ಟವರು ಮಾತ್ರ ನೋಡಬೇಕಾಗಿದೆ. ಆದರೆ ವಾಸ್ತವದಲ್ಲಿ 15-16ವರ್ಷದ ಹುಡುಗಿಯರು ಈ ಲವ್​ ಜಿಹಾದ್​ಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೆನ್ಸಾರ್ ಬೋರ್ಡ್​ನ್ನು ಸಂಪರ್ಕಿಸಬೇಕು. ದೆಹಲಿಯಲ್ಲಿ ಈ ಚಿತ್ರಕ್ಕೆ U/A ಸರ್ಟಿಫಿಕೇಟ್​ ಕೊಡಿಸಬೇಕು. ಎಲ್ಲ ವರ್ಗದವರೂ ನೋಡುವಂತಾಗಬೇಕು’ ಎಂದು ಬಿಜೆಪಿ ವಕ್ತಾರರಾದ ಪ್ರವೀಣ್​ ಶಂಕರ್​ ಕಪೂರ್​ ಹೇಳಿದ್ದಾರೆ.

ಇದನ್ನೂ ಓದಿ: The Kerala Story: ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಿ: ಹಿಂದು ಜನಜಾಗೃತಿ ಸಮಿತಿ

ಸುದಿಪ್ತೋ ಸೇನ್​ ನಿರ್ದೇಶಿಸಿ, ಆದಾ ಶರ್ಮಾ ಮತ್ತಿತರರು ನಟಿಸಿರುವ ದಿ ಕೇರಳ ಸ್ಟೋರಿ ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿಯವರೂ ಹೊಗಳಿದ್ದಾರೆ. ಕೇರಳದಲ್ಲಿ ಸಾವಿರಾರು ಹಿಂದು-ಕ್ರಿಶ್ಚಿಯನ್​ ಯುವತಿಯರನ್ನು ಸಿರಿಯಾ-ಅಫ್ಘಾನಿಸ್ತಾನಕ್ಕೆ ಕರೆದೊಯ್ದು, ಐಸಿಸ್​ ಭಯೋತ್ಪಾದನಾ ಸಂಘಟನೆಗೆ ಸೇರಿಸುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಇದು ನೈಜ ಕತೆಯಾಧಾರಿತ ಸಿನಿಮಾ ಎಂದು ಚಿತ್ರದ ನಿರ್ದೇಶಕ/ನಿರ್ಮಾಪಕರು ಹೇಳಿಕೊಂಡಿದ್ದಾರೆ. ಹಲವು ರಾಜಕೀಯ ಪಕ್ಷಗಳು, ಎಡಪಂಥೀಯರ ವಿರೋಧದ ನಡುವೆಯೂ ಮೇ 5ರಂದು ಸಿನಿಮಾ ಬಿಡುಗಡೆಗೊಂಡಿದೆ. ದಿ ಕೇರಳ ಸ್ಟೋರಿಯನ್ನು ಈಗಾಗಲೇ ಮಧ್ಯಪ್ರದೇಶದಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ.

Exit mobile version