Site icon Vistara News

Terror Attack | ನಿನ್ನೆಯಷ್ಟೇ ಉಗ್ರದಾಳಿಯಾಗಿದ್ದ ರಾಜೌರಿಯಲ್ಲಿ ಇಂದು ಮತ್ತೆ ಐಇಡಿ ಸ್ಫೋಟ; ಮಗು ಸಾವು

Terror Attack Rajouri

ಶ್ರೀನಗರ: ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಇಂದು ಮತ್ತೊಂದು ಅನಾಹುತ ಆಗಿದೆ. ಭಾನುವಾರವಷ್ಟೇ ಇಲ್ಲಿ ಇಬ್ಬರು ಉಗ್ರರು, ರಾಮಮಂದಿರದ ಬಳಿ ಹಲವು ಹಿಂದುಗಳ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಒಂಭತ್ತು ಮಂದಿ ಗಾಯಗೊಂಡಿದ್ದಾರೆ. ಅದರಲ್ಲೂ ಒಂದಷ್ಟು ಜನರ ಪರಿಸ್ಥಿತಿ ಗಂಭೀರವಾಗಿದ್ದು, ರಾಜೌರಿ ಸರ್ಕಾರಿ ಆಸ್ಪತ್ರೆಯಿಂದ ಜಮ್ಮುವಿಗೆ ಏರ್​ಲಿಫ್ಟ್​ ಮಾಡಲಾಗಿದೆ.

ಈಗ ರಾಜೌರಿಯಲ್ಲಿ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟವಾಗಿದೆ. ಮೊನ್ನೆ ಉಗ್ರದಾಳಿಯಾದ ಸ್ಥಳದ ಸಮೀಪವೇ ಐಇಡಿ ಬ್ಲಾಸ್ಟ್​ ಆಗಿದೆ. ಈ ದುರ್ಘಟನೆಯಲ್ಲಿ ಒಂದು ಮಗು ಮೃತಪಟ್ಟಿದ್ದು, ಇನ್ನೊಬ್ಬರ ಸ್ಥಿತಿ ಗಂಭೀರವಾಗಿದೆ. ಹಾಗೇ, ಮತ್ತೂ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮಾಧ್ಯಮ ಸಿಬ್ಬಂದಿ ಸಾಧ್ಯವಾದಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿ ಮುಕೇಶ್​ ಸಿಂಗ್​ ತಿಳಿಸಿದ್ದಾರೆ.

ಭಾನುವಾರ ಮೂರು ಮನೆಗಳ ಮೇಲೆ ದಾಳಿ ಮಾಡಿದ ಉಗ್ರರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಅವರೇ ಈ ಐಇಡಿ ಇಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ನಾವು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತೇವೆ ಎಂದು ಮುಕೇಶ್​ ಸಿಂಗ್​ ಮಾಹಿತಿ ನೀಡಿದ್ದಾರೆ. ಅಲ್ಲದೆ, ಭಾನುವಾರ ದಾಳಿ ಮಾಡಿದ ಉಗ್ರರು ಗುಂಡಿನ ದಾಳಿ ನಡೆಸುವುದಕ್ಕೂ ಪೂರ್ವ ಅಲ್ಲಿದ್ದವರ ಹೆಸರು ಕೇಳಿಕೊಂಡು, ಐಡಿ ಕಾರ್ಡ್​ ಚೆಕ್​ ಮಾಡಿದ್ದಾರೆ. ಹಿಂದುಗಳು ಎಂಬುದನ್ನು ದೃಢಪಡಿಸಿಕೊಂಡೇ ಗುಂಡು ಹಾರಿಸಿದ್ದಾರೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Rajouri Terror Attack | ಉಗ್ರದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆ; ಇಂದು ರಾಜೌರಿ ಬಂದ್​​ಗೆ ಕರೆ

Exit mobile version