Site icon Vistara News

ಬ್ರಾಹ್ಮಣರನ್ನು ಅವಹೇಳನ ಮಾಡಿದ ಟಿಎಂಸಿ ನಾಯಕ; ಮಮತಾ ಬ್ಯಾನರ್ಜಿಯೂ ಅದೇ ಸಮುದಾಯ ಎನ್ನುತ್ತಿದ್ದಂತೆ ಟ್ವೀಟ್ ಡಿಲೀಟ್ !

Jawhar Sircar courted controversy With anti Brahmin tweet

ನವ ದೆಹಲಿ: ಬ್ರಾಹ್ಮಣ ಸಮುದಾಯದ ಬಗ್ಗೆ ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದ ತೃಣಮೂಲ ಕಾಂಗ್ರೆಸ್​ನ ರಾಜ್ಯ ಸಭಾ ಸಂಸದ ಜವಾಹರ್​ ಸರ್ಕಾರ್​ ವಿರುದ್ಧ ಅನೇಕ ಪ್ರಮುಖ ನಾಯಕರು, ಗಣ್ಯರು ವಾಗ್ದಾಳಿ ನಡೆಸಿದ್ದಾರೆ. ತಮ್ಮ ಟ್ವೀಟ್​ನಿಂದ ಆಗುತ್ತಿರುವ ವಿವಾದದ ಗಂಭೀರತೆಯನ್ನು ಅರ್ಥ ಮಾಡಿಕೊಂಡ ಜವಾಹರ್​ ಸರ್ಕಾರ್​ ಟ್ವೀಟ್ ಡಿಲೀಟ್​ ಮಾಡಿದ್ದಾರೆ. ಹಾಗಿದ್ದಾಗ್ಯೂ ಅದರ ಸ್ಕ್ರೀನ್​ಶಾಟ್​ಗಳು ಎಲ್ಲೆಡೆ ಹರಿದಾಡುತ್ತಿವೆ.

‘ಭಾರತದಲ್ಲಿ ಇಸ್ಲಾಂ ರಾಜರುಗಳ ಆಡಳಿತ ಇತಿಹಾಸದಲ್ಲಿ ಒಂದು ರಕ್ತಸಿಕ್ತ ಅಧ್ಯಾಯ. ಕ್ರೂರ ರಾಜರ ಆಳ್ವಿಕೆಯಿಂದ 80 ಮಿಲಿಯನ್​ಗಳಷ್ಟು ಜನಸಂಖ್ಯೆ ಕಡಿಮೆಯಾಯಿತು. 2.5 ಮಿಲಿಯನ್​ ಮಹಿಳೆಯರನ್ನು ಗುಲಾಮರಂತೆ ಹರಾಜು ಹಾಕಲಾಯಿತು. ಖಲ್ಜಿ ನಳಂದಾವನ್ನು ಸುಟ್ಟು ಹಾಕಿದ. ಆದರೆ ನಾವು ಮಾಡಿದ್ದೇನು? ಅದೇ ಖಲ್ಜಿ ಹೆಸರನ್ನು ನಳಂದಾ ಬಳಿಯ ರೈಲ್ವೆ ಸ್ಟೇಶನ್​ಗೆ ಇಟ್ಟಿದ್ದೇವೆ..’ ಎಂದು ಖ್ಯಾತ ಪ್ಯಾನಲಿಸ್ಟ್​, ಅಂಕಣಕಾರ ಆನಂದ್ ರಘುನಾಥನ್​ ಅವರು ಟ್ವೀಟ್ ಮಾಡಿದ್ದರು. ಆ ಟ್ವೀಟ್​ ರೀಟ್ವೀಟ್ ಮಾಡಿಕೊಂಡ ಜವಾಹರ್​ ಸಿರ್ಕಾರ್, ‘ಮುಸ್ಲಿಮರು ಕಿತ್ತುಕೊಂಡಿದ್ದು ಶೇ.1ರಷ್ಟನ್ನು. ಅದಕ್ಕಾಗಿ ಶೇ.99ರಷ್ಟು ಭಾರತೀಯರು ಇಸ್ಲಾಂ ಪೋಬಿಯಾಕ್ಕೆ ಒಳಗಾಗಿದ್ದಾರೆ. ಆದರೆ ಬೌದ್ಧ ಧರ್ಮಕ್ಕೆ ಸಂಬಂಧಪಟ್ಟ ಮಹತ್ವದ ಶಿಲ್ಪಕಲೆಗಳನ್ನು ನಾಶ ಮಾಡಿದ್ದು ಯಾರು? ಬ್ರಾಹ್ಮಣರೇ ಅಲ್ಲವೇ?. ಇಲ್ಲಿನ ಬ್ರಾಹ್ಮಣರ ಅಹಂಕಾರ ತಗ್ಗಿಸುವ ಕೆಲಸವನ್ನು ಶಿಕ್ಷಣ ಮಾಡಬೇಕು’ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದರು. ಈ ಟ್ವೀಟ್​​ ಬ್ರಾಹ್ಮಣ ಸಮುದಾಯದ ಗಣ್ಯರು, ಪ್ರಮುಖರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ.

ಸರ್ಕಾರ್​ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿದ ಸಿ. ರಾಜಗೋಪಾಲಾಚಾರಿ (ಪಶ್ಚಿಮ ಬಂಗಾಳ ಮಾಜಿ ರಾಜ್ಯಪಾಲ, ವಕೀಲ, ಖ್ಯಾತ ಬರಹಗಾರ) ಅವರ ಮರಿಮೊಮ್ಮಗ ಸಿ.ಆರ್​.ಕೇಶವನ್​ ಅವರು ‘ಸರ್ಕಾರ್​ ಜೀ ಅವರೇ, ನೀವು ಯಾವ ಸಮುದಾಯ (ಬ್ರಾಹ್ಮಣ)ದ ವಿರುದ್ಧ ವಿಷ ಕಾರುತ್ತಿದ್ದೀರೋ, ಅದೇ ಸಮುದಾಯದಿಂದಲೇ ನಿಮ್ಮ ನಾಯಕಿ ಮಮತಾ ಬ್ಯಾನರ್ಜಿ ಕೂಡ ಬಂದಿದ್ದಾರೆ’ ಎಂದು ಹೇಳಿದ್ದಾರೆ. ಹಾಗೇ, ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಕೂಡ ಜವಾಹರ್​ ಸರ್ಕಾರ್​ ಅವರ ಮಾತುಗಳನ್ನು ಖಂಡಿಸಿದ್ದಾರೆ. ‘ನಿಮ್ಮ ಮಾತುಗಳಿಗೆ ನನ್ನ ಬಲವಾದ ಆಕ್ಷೇಪವಿದೆ. ಒಂದು ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಇದೊಂದು ಅಸಹ್ಯಕರ ಮತ್ತು ದ್ವೇಷಪೂರಿತ ಟ್ವೀಟ್​. ಕೂಡಲೇ ನಿಮ್ಮ ಟ್ವೀಟ್ ಡಿಲೀಟ್ ಮಾಡಿ’ ಎಂದು ಆಗ್ರಹಿಸಿದ್ದರು. ಸದ್ಯ ಸರ್ಕಾರ್​, ತಮ್ಮ ಟ್ವೀಟ್​ ಡೀಲಿಟ್​ ಮಾಡಿ, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ.

ಇದನ್ನೂ ಓದಿ: Vishwakarma Jayanti | ಬ್ರಾಹ್ಮಣರಿಗೆ ಮೀಸಲಾತಿ ಕೊಟ್ಟಿದ್ದು ಸಂವಿಧಾನ ವಿರೋಧಿ ನೀತಿ: ಸಿದ್ದರಾಮಯ್ಯ

Exit mobile version