Site icon Vistara News

Bharat Jodo Yatra| ಭಾರತ್​ ಜೋಡೋ ಯಾತ್ರೆಯಲ್ಲಿ ಕಾಲ್ತುಳಿತ; ಕೆ ಸಿ ವೇಣುಗೋಪಾಲ್​​ಗೆ ಗಾಯ

Bharat Jodo Yatra

ಇಂದೋರ್​: ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆ ಮಧ್ಯಪ್ರದೇಶಕ್ಕೆ ಕಾಲಿಟ್ಟು ಎಂಟನೇ ದಿನ. ರಾಹುಲ್​ ಗಾಂಧಿ ನೇತೃತ್ವದಲ್ಲಿ ಹಲವು ಪ್ರಮುಖ ನಾಯಕರು, ಸ್ಥಳೀಯ ಕಾರ್ಯಕರ್ತರು, ಜನಸಾಮಾನ್ಯರು ಈ ಯಾತ್ರೆಯಲ್ಲಿ ಪಾಲ್ಗೊಂಡು ಹೆಜ್ಜೆ ಹಾಕುತ್ತಿದ್ದಾರೆ. ಇಂದೋರ್​​ನಲ್ಲಿ ನಡೆಯುತ್ತಿರುವ ಭಾರತ್​ ಜೋಡೋ ಯಾತ್ರೆಯಲ್ಲಿ ಭಾನುವಾರ ಸಣ್ಣಮಟ್ಟದ ಅವಘಡ ಸಂಭವಿಸಿದ್ದು ವರದಿಯಾಗಿದೆ.

ಭಾನುವಾರ (ನ.27)ದಂದು ಭಾರತ್​ ಜೋಡೋ ಯಾತ್ರೆಯಲ್ಲಿ ಕಾಲ್ತುಳಿತ ಉಂಟಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್​ ಅವರು ಬಿದ್ದು, ಅವರ ಕೈ ಮತ್ತು ಮೊಣಕಾಲಿಗೆ ಗಾಯವಾಗಿದೆ. ನಂತರ ಅವರಿಗೆ ಯಾತ್ರೆಯ ಆರೋಗ್ಯ ಶಿಬಿರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗಾಯಕ್ಕೆ ಔಷಧ ಹಾಕಿದ ಬಳಿಕ, ಕೆಲ ಹೊತ್ತಲ್ಲೇ ಮತ್ತೆ ಅವರು ಪಾದಯಾತ್ರೆಗೆ ಸೇರಿಕೊಂಡಿದ್ದಾಗಿ ವರದಿಯಾಗಿದೆ.

ಸೆಪ್ಟೆಂಬರ್​ 7ರಿಂದ ಪ್ರಾರಂಭವಾದ ಕಾಂಗ್ರೆಸ್ ಭಾರತ್​ ಜೋಡೋ ಯಾತ್ರೆ ಯಾವೆಲ್ಲ ರಾಜ್ಯಗಳಿಗೆ ಸಂಚಾರ ಮಾಡಿದೆಯೋ ಅಲ್ಲೆಲ್ಲ ಅನೇಕರು ಪಾದಯಾತ್ರೆಗೆ ಸೇರ್ಪಡೆಯಾಗುತ್ತಿದ್ದಾರೆ. ಯಾವುದೇ ಅವಘಡ ಆಗದಂತೆ ನಿಯಂತ್ರಿಸಲು ಭದ್ರತಾ ಸಿಬ್ಬಂದಿಯೂ ಈ ಯಾತ್ರೆಯಲ್ಲಿ ನಡೆಯುತ್ತಿದ್ದಾರೆ. ಇಷ್ಟು ದಿನದಲ್ಲಿ ನೂಕುನುಗ್ಗಲು ಆಗಿ, ಯಾರೊಬ್ಬರು ಗಾಯಗೊಂಡ ಘಟನೆ ನಡೆದಿರಲಿಲ್ಲ. ಆದರೆ ಭಾನುವಾರ ಇಂದೋರ್​​ನಲ್ಲಿ ಹಲವರು ರಾಹುಲ್ ಗಾಂಧಿಯನ್ನು ಮಾತನಾಡಿಸಲು ಒಮ್ಮೆಲೇ ನುಗ್ಗಿಬಂದರು. ಈ ವೇಳೆ ಉಂಟಾದ ನೂಕುನುಗ್ಗಲು ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆ. ಹಾಗಾಗಿ ಕಾಲ್ತುಳಿತ ಆಗಿ, ವೇಣುಗೋಪಾಲ್​ ಬಿದ್ದಿದ್ದಾರೆ. ಇನ್ನೂ ಹಲವರು ಕೆಳಗೆ ಬಿದ್ದು, ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ವರದಿಯಾಗಿದೆ.

ಇದನ್ನೂ ಓದಿ: Video| ಭಾರತ್​ ಜೋಡೋ ಯಾತ್ರೆ ವೇಳೆ ನಾಯಿಯನ್ನು ಮುದ್ದಾಡಿ, ನೀಲಿ ಕಾರ್ಪೆಟ್​ ಮೇಲೆ ಬುಲೆಟ್​ ಬೈಕ್​ ರೈಡ್ ಮಾಡಿದ ರಾಹುಲ್​ ಗಾಂಧಿ​​

Exit mobile version