Site icon Vistara News

ಮೂತ್ರಪಿಂಡ ಕಸಿ ಸರ್ಜರಿಗಾಗಿ ಸಿಂಗಾಪುರಕ್ಕೆ ತೆರಳಿದ ಲಾಲೂ ಪ್ರಸಾದ್​ ಯಾದವ್​; ಕಿಡ್ನಿ ದಾನ ಮಾಡಲಿರುವ ಪುತ್ರಿ ರೋಹಿಣಿ

Lalu Prasad Yadav left to Singapore For kidney transplant

ನವ ದೆಹಲಿ: ರಾಷ್ಟ್ರೀಯ ಜನತಾ ದಳ (ಆರ್​ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್​ ಅವರು ಡಿಸೆಂಬರ್​ ಮೊದಲ ವಾರದಲ್ಲಿ ಕಿಡ್ನಿ ಕಸಿಗೆ ಒಳಗಾಗಲಿದ್ದು, ತನ್ನಿಮಿತ್ತ ಸಿಂಗಾಪುರಕ್ಕೆ ತೆರಳಿದ್ದಾರೆ. ಲಾಲೂ ಪ್ರಸಾದ್​ ಯಾದವ್​​ರಿಗೆ ಅವರ ಪುತ್ರಿ ರೋಹಿಣಿ ಆಚಾರ್ಯ ಅವರೇ ಕಿಡ್ನಿ ದಾನ ಮಾಡಲಿದ್ದು, ಅದಕ್ಕೆ ಸಂಬಂಧಪಟ್ಟ ಎಲ್ಲ ರೀತಿಯ ತಪಾಸಣೆಗಳು ಮುಕ್ತಾಯಗೊಂಡಿವೆ.

ಲಾಲೂ ಪ್ರಸಾದ್​ ಯಾದವ್​ಗೆ ಈಗ 74 ವರ್ಷ. ಹಲವು ವರ್ಷಗಳಿಂದಲೂ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೆಹಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಿದ್ದರು. ನವೆಂಬರ್​​ ಮೊದಲವಾರದಲ್ಲಿ ವಾಪಸ್​ ಬಂದಿದ್ದರು. ಅವರೀಗ ಮತ್ತೆ ಸಿಂಗಾಪುರಕ್ಕೆ ತೆರಳಿದ್ದು, ಅವರೊಂದಿಗೆ ಕಿರಿಯ ಪುತ್ರ ತೇಜಸ್ವಿ ಯಾದವ್​ ಮತ್ತು ಕುಟುಂಬದ ಇನ್ನಿತರ ಸದಸ್ಯರು ತೆರಳಿದ್ದಾರೆ.

ಇದೀಗ ಸಿಂಗಾಪುರಕ್ಕೆ ತೆರಳಿರುವ ಲಾಲೂ ಪ್ರಸಾದ್​ ಯಾದವ್​ಗೆ ಇನ್ನಷ್ಟು ಚೆಕಪ್​​ಗಳು, ವೈದ್ಯಕೀಯ ತಪಾಸಣೆಗಳು ಆಗಬೇಕಿದೆ. ಅದನ್ನೆಲ್ಲ ಮುಗಿಸಿ, ಡಿಸೆಂಬರ್​ ಮೊದಲವಾರದಲ್ಲಿ ಅವರು ಕಿಡ್ನಿ ಕಸಿ ಸರ್ಜರಿಗೆ ಒಳಗಾಗಲಿದ್ದಾರೆ. ‘ಈ ಶಸ್ತ್ರಚಿಕಿತ್ಸೆ ಯಶಸ್ವಿ ಆಗುವ ಬಗ್ಗೆ ಖಂಡಿತ ವಿಶ್ವಾಸವಿದೆ.’ಎಂದು ತೇಜಸ್ವಿ ಯಾದವ್​ ಹೇಳಿದ್ದಾರೆ. ಇದೀಗ ಕಿಡ್ನಿ ಕೊಡುತ್ತಿರುವ ರೋಹಿಣಿ ಆಚಾರ್ಯ ಕಳೆದ ತಿಂಗಳು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡು, ‘ತಾನು ತನ್ನ ಒಂದು ಮೂತ್ರಪಿಂಡವನ್ನು ಅಪ್ಪನಿಗೆ ಕೊಡುತ್ತೇನೆ’ ಎಂದಿದ್ದರು.

ಇದನ್ನೂ ಓದಿ: Bhai Bhatijavaad | ಮೋದಿ ʼಪರಿವಾರವಾದʼ ಟೀಕೆ ಬೆನ್ನಲ್ಲೇ ತೇಜ್‌ ಪ್ರತಾಪ್‌ ಯಾದವ್‌ ಸಭೆಯಲ್ಲಿ ಅವರ ಬಾವ ಭಾಗಿ!

Exit mobile version