Site icon Vistara News

Mann Ki Baat: ಪ್ರಧಾನಿ ಮೋದಿಯವರ ಮಾರ್ಗದರ್ಶಕ ಯಾರು?; ಮನ್​ ಕೀ ಬಾತ್​​ನಲ್ಲಿ ಸ್ಮರಣೆ

Mann Ki Baat Laxman Rao Inamdar is Mentor Of PM Modi

#image_title

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಇಂದು 100ನೇ ಆವೃತ್ತಿಯ ಮನ್​ ಕಿ ಬಾತ್​​ (Mann Ki Baat)ನಲ್ಲಿ ಮಾತನಾಡಿದ್ದಾರೆ. ಮನ್​ ಕೀ ಬಾತ್​ ನನ್ನ ಪಾಲಿಗೆ ವ್ರತವಿದ್ದಂತೆ ಎಂದು ಅವರು ಹೇಳಿದ್ದಾರೆ. ಹಲವು ವಿಷಯಗಳನ್ನು/ಗಣ್ಯರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಅವರು ಹೇಳಿದ್ದು ಆರ್​ಎಸ್​ಎಸ್​ ನಾಯಕ ಮತ್ತು ವಕೀಲರಾಗಿದ್ದ ಲಕ್ಷ್ಮಣ್ ರಾವ್ ಇನಾಮ್​​​ದಾರ್ (Laxman Rao Inamdar) ಅವರ ಹೆಸರು. ತಾವು ಲಕ್ಷ್ಮಣ್​ ರಾವ್ ಅವರನ್ನು ತಮ್ಮ ಮಾರ್ಗದರ್ಶಕರನ್ನಾಗಿ (ಮೆಂಟರ್​) ಪರಿಗಣಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.

‘ನನಗೆ ಒಬ್ಬರು ಮಾರ್ಗದರ್ಶಕರು ಇದ್ದರು. ಅವರು ಲಕ್ಷ್ಮಣ್​ ರಾವ್​ ಇನಾಮ್​​​ದಾರ್​ ಜಿ. ನಾವೆಲ್ಲ ಅವರನ್ನು ವಕೀಲ್ ಸಾಹೇಬ್​ ಎಂದೇ ಕರೆಯುತ್ತಿದ್ದೆವು. ನಾವು ಇನ್ನೊಬ್ಬರಲ್ಲಿರುವ ಒಳ್ಳೆಯ ಗುಣ-ಸ್ವಭಾವಗಳನ್ನು ಗೌರವಿಸಬೇಕು ಮತ್ತು ಅವುಗಳನ್ನು ನಮ್ಮೊಳಗೆ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಅವರು ಸದಾ ಹೇಳುತ್ತಿದ್ದರು. ಲಕ್ಷ್ಮಣ್​ ಜಿ ಮಾತುಗಳು ನನ್ನಲ್ಲಿ ಸ್ಫೂರ್ತಿ ತುಂಬಿವೆ. ಇನ್ನೊಬ್ಬರಿಂದ ಕಲಿಯಲು, ಮತ್ತೊಬ್ಬರ ಸಾಧನೆಯಿಂದ ನಾವು ಸ್ಫೂರ್ತಿ ಪಡೆಯಲು ಮನ್​ ಕೀ ಬಾತ್​ ಒಂದು ಪ್ರಮುಖ ಮಾಧ್ಯಮವಾಯಿತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ:Mann ki Baat : ಮನ್‌ ಕೀ ಬಾತ್‌ಗೆ ವಿಶೇಷ ಸಂದೇಶ ನೀಡಿದ ಯುನೆಸ್ಕೊ ಮುಖ್ಯಸ್ಥರು ಹೇಳಿದ್ದೇನು?

ನರೇಂದ್ರ ಮೋದಿಯವರು ಉಲ್ಲೇಖಿಸಿದ ಲಕ್ಷ್ಮಣ್​ ರಾವ್​ ಇನಾಮ್​ದಾರ್​ ಅವರು ಹುಟ್ಟಿದ್ದು 1917ರ ಸೆಪ್ಟೆಂಬರ್​ 19ರಂದು. ಗುಜರಾತ್​​ನಲ್ಲಿ ಆರ್​​ಎಸ್​ಎಸ್​ನ ಸಂಸ್ಥಾಪಕ ಸದಸ್ಯರು. ರಾಜ್ಯದೆಲ್ಲೆಡೆ ಶಾಖಾಗಳನ್ನು ಸ್ಥಾಪಿಸಲು ಅಪಾರ ಪರಿಶ್ರಮ ವಹಿಸಿದ್ದರು. ನರೇಂದ್ರ ಮೋದಿಯವರನ್ನು 8ನೇ ವಯಸ್ಸಿನಲ್ಲಿ ಬಾಲಸ್ವಯಂಸೇವಕನನ್ನಾಗಿ ಆರ್​ಎಸ್​ಎಸ್​ಗೆ ಸೇರಿಸಿಕೊಂಡಿದ್ದು ಇದೇ ಲಕ್ಷ್ಮಣ್​ ಇನಾಮ್​ದಾರ್​.

ಬಳಿಕ 1980ರ ದಶಕದಲ್ಲಿ ಮೋದಿಯವರು ರಾಜಕೀಯ ಪ್ರವೇಶದ ಹೊಸ್ತಿಲಲ್ಲಿ ಇದ್ದಾಗಲೂ ಲಕ್ಷ್ಮಣ್​ ರಾವ್​ ಇನಾಮ್​ದಾರ್​ ಅವರೇ ಮೆಂಟರ್​ ಆಗಿದ್ದುಕೊಂಡು, ಸಲಹೆ-ಸೂಚನೆ ಕೊಟ್ಟಿದ್ದರು. ಆರ್​​ಎಸ್​ಎಸ್​ನ ತಳಮಟ್ಟದ ಚಟುವಟಿಕೆಗಳಲ್ಲೂ ಮೋದಿಯವರನ್ನು ಇವರು ಸಕ್ರಿಯವಾಗಿಸಿಕೊಂಡಿದ್ದಾರೆ. ಆರ್​ಎಸ್​ಎಸ್​ನ ಪ್ರಬಲ ನಾಯಕರಾಗಿದ್ದ ಲಕ್ಷ್ಮಣ್​ ರಾವ್​ ಇನಾಮ್​​ದಾರ್​ ಅವರು ಮೋದಿಯವರಿಗೆ ಅದೆಷ್ಟು ಒತ್ತಾಸೆಯಾಗಿ ನಿಂತಿದ್ದರು ಎಂದರೆ, ನರೇಂದ್ರ ಮೋದಿಯನ್ನು ಲಕ್ಷ್ಮಣ್​ ರಾವ್​ರ ಮಾನಸ ಪುತ್ರ ಎಂದೇ ಆರ್​ಎಸ್​ಎಸ್​ ವಲಯದಲ್ಲಿ ಕರೆಯಲಾಗುತ್ತಿತ್ತು ಎಂದು ರಾಜಕೀಯ ಚರಿತ್ರೆಕಾರ ಕಿಂಗ್ಶುಕ್​ ನಾಗ್​ ಹೇಳಿದ್ದರು.

Exit mobile version