Site icon Vistara News

Mukesh Ambani | ತಿರುಪತಿ ದೇವಾಲಯಕ್ಕೆ 1.5 ಕೋಟಿ ರೂ. ಕಾಣಿಕೆ ನೀಡಿದ ಮುಕೇಶ್‌ ಅಂಬಾನಿ

Tirumala

ತಿರುಮಲ: ದೇಶದ ಶ್ರೀಮಂತ ಉದ್ಯಮಿ, ರಿಯಲನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (RIL) ಮುಖ್ಯಸ್ಥ ಮುಕೇಶ್‌ ಅಂಬಾನಿ (Mukesh Ambani) ಅವರು ಶುಕ್ರವಾರ ತಿರುಮಲದಲ್ಲಿರುವ ಐತಿಹಾಸಿಕ ವೆಂಕಟೇಶ್ವರ ದೇವಾಲಯಕ್ಕೆ ೧.೫ ಕೋಟಿ ರೂ. ಕಾಣಿಗೆ ನೀಡಿದ್ದಾರೆ. ಎನ್‌ಕೋರ್‌ ಹೆಲ್ತ್‌ಕೇರ್‌ ಸಿಇಒ ವಿರೇನ್‌ ಮರ್ಚಂಟ್‌ ಪುತ್ರಿ ರಾಧಿಕಾ ಮರ್ಚಂಟ್‌ ಹಾಗೂ ಆರ್‌ಐಎಲ್‌ ಅಧಿಕಾರಿಗಳ ಜತೆ ದೇವಾಲಯಕ್ಕೆ ತೆರಳಿದ ಅವರು ದೇವರ ದರ್ಶನ ಪಡೆದರು. ಇದಾದ ಬಳಿಕ ದೇಣಿಗೆ ನೀಡಿದರು.

ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವೆಂಕಟ ಧರ್ಮ ರೆಡ್ಡಿ ಅವರಿಗೆ ಮುಕೇಶ್‌ ಅಂಬಾನಿ ಅವರು ದೇಣಿಗೆಯ ಚೆಕ್‌ ನೀಡಿದರು ಎಂದು ಟಿಟಿಡಿ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಮುಕೇಶ್‌ ಅಂಬಾನಿ ಅವರು ತಿರುಪತಿಯ ಆರಾಧಕರಾಗಿದ್ದು, ಆಗಾಗ ಭೇಟಿ ನೀಡುತ್ತಾರೆ. ಶುಕ್ರವಾರ ಅವರು ಒಂದು ಗಂಟೆ ಅಭಿಷೇಕ ಸೇರಿ ಹಲವು ವಿಧಿವಿಧಾನಗಳನ್ನು ನೆರವೇರಿಸಿದರು.

ಇದನ್ನೂ ಓದಿ | ಸತತ ಎರಡನೇ ವರ್ಷ ಸಂಬಳ ಬೇಡ ಎಂದ ರಿಲಯನ್ಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ

Exit mobile version