Site icon Vistara News

Vande Bharat Express: 5 ವಂದೇ ಭಾರತ್​ ರೈಲುಗಳಿಗೆ ಏಕಕಾಲದಲ್ಲಿ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ

PM Modi flags off

#image_title

ಭೋಪಾಲ್​: ಪ್ರಧಾನಿ ನರೇಂದ್ರ ಮೋದಿ (PM Modi) ಯವರು ಇಂದು ಭೋಪಾಲ್​​ನ ರಾಣಿ ಕಮಲಪತಿ ರೈಲ್ವೆ ಸ್ಟೇಶನ್​ನಿಂದ ಏಕಕಾಲಕ್ಕೆ ಒಟ್ಟು ಐದು ವಂದೇ ಭಾರತ್ ರೈಲುಗಳ (Vande Bharat Express) ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ‘ಭೋಪಾಲ್-ಜಬಲ್ಪುರ್​’, ‘ಖಜುರಾಹೊ-ಭೋಪಾಲ್-ಇಂದೋರ್’ ಮಡಗಾಂವ್​ (ಗೋವಾ)-ಮುಂಬಯಿ ಮತ್ತು ‘ಧಾರವಾಡ-ಬೆಂಗಳೂರು‘ ಮತ್ತು ‘ಹತಿಯಾ-ಪಾಟ್ನಾ’ ಮಾರ್ಗದ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲುಗಳ ಸಂಚಾರವನ್ನು ಇಂದು ಮೋದಿಯವರು ಉದ್ಘಾಟಿಸಿದ್ದಾರೆ. ಭೋಪಾಲ್​ ಮಾರ್ಗದ ರೈಲುಗಳಿಗೆ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದ ಪ್ರಧಾನಿ ಮೋದಿ, ಉಳಿದ ಮಾರ್ಗಗಳ ವಂದೇ ಭಾರತ್​ ಎಕ್ಸ್​ಪ್ರೆಸ್​ ಸಂಚಾರವನ್ನು ವರ್ಚ್ಯುವಲ್ ಆಗಿ ಉದ್ಘಾಟನೆ ಮಾಡಿದ್ದಾರೆ.

ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ಗತಿ ಶಕ್ತಿ ಯೋಜನೆಯ ಭಾಗವಾಗಿ ದೇಶದಲ್ಲಿ ವಂದೇ ಭಾರತ್​ ರೈಲುಗಳ ಸಂಚಾರವನ್ನು ಹೆಚ್ಚಿಸಲಾಗುತ್ತಿದೆ. ಇಂದು ಮಡಗಾಂವ್​-ಮುಂಬಯಿ ವಂದೇ ಭಾರತ್ ಎಕ್ಸ್​​ಪ್ರೆಸ್​ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು, ಇದು ಗೋವಾದ ಮೊದಲ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲು. ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆಸ್ಟೇಶನ್​ನಿಂದ ಗೋವಾದ ಮಡಗಾಂವ್​​ ರೈಲ್ವೆ ಸ್ಟೇಶನ್​ ತಲುಪುತ್ತದೆ. ಅಲ್ಲಿಂದ ಹೊರಟು ಮರಳಿ ಮುಂಬಯಿಗೆ ಬರುತ್ತದೆ. ಈಗಾಗಲೇ ಈ ಎರಡೂ ನಗರಗಳ ಮಧ್ಯೆ ಇರುವ ರೈಲುಗಳಲ್ಲಿ ಪ್ರಯಾಣಿಸಲು ಬೇಕಾದ ಅವಧಿಗಿಂತಲೂ ಒಂದು ತಾಸು ಕಡಿಮೆ ಅವಧಿಯಲ್ಲಿ ಸಂಚಾರ ಮಾಡಬಹುದಾಗಿದೆ. ಇನ್ನು ಇವತ್ತು ಉದ್ಘಾಟಿಸಲ್ಪಟ್ಟ ಹತಿಯಾ-ಪಾಟ್ನಾ ರೈಲು ಜಾರ್ಖಂಡ್​​ದ ಮೊದಲ ವಂದೇ ಭಾರತ್ ರೈಲಾಗಿದೆ.

ಇದನ್ನೂ ಓದಿ: Vande Bharat Express: ಕರ್ನಾಟಕದ 2ನೇ ವಂದೇ ಭಾರತ್‌ ರೈಲಿಗೆ ಇಂದು ಮೋದಿ ಹಸಿರು ನಿಶಾನೆ, ಒಟ್ಟು 5 ರೈಲು ಶುರು

ಹಾಗೇ, ಇಂದು ಚಾಲನೆ ಸಿಕ್ಕ ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್​​ಪ್ರೆಸ್ ರೈಲು ಕರ್ನಾಟಕದ ಎರಡನೇ ವಂದೇ ಭಾರತ್ ಟ್ರೇನ್​. ಈ ರೈಲು ಧಾರವಾಡ-ಹುಬ್ಬಳ್ಳಿ, ದಾವಣಗೆರೆ ಮಾರ್ಗವಾಗಿ ಬೆಂಗಳೂರನ್ನು ತಲುಪುತ್ತದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮೈಸೂರು-ಬೆಂಗಳೂರು-ಚೆನ್ನೈ ವಂದೇ ಭಾರತ್ ರೈಲಿಗೆ ಮೋದಿ ಚಾಲನೆ ನೀಡಿದ್ದರು. ಈ ಮೈಸೂರು-ಬೆಂಗಳೂರು-ಚೆನ್ನೈ ರೈಲು ದಕ್ಷಿಣ ಭಾರತದ ಮೊದಲ ವಂದೇ ಭಾರತ್​ ರೈಲು ಆಗಿತ್ತು.

Exit mobile version