Site icon Vistara News

ಕಾರು ಕದ್ದು ಪರಾರಿಯಾಗುತ್ತಿದ್ದವರನ್ನು ಬೆನ್ನಟ್ಟಿದ ಪೊಲೀಸ್​ ಕಾನ್​ಸ್ಟೆಬಲ್​ ದುಷ್ಕರ್ಮಿಗಳ ಗುಂಡಿಗೆ ಬಲಿ

policeman dead after Shot By Criminals in Punjab

ಕಪುರ್ತಲಾ: ಕಾರನ್ನು ಕದ್ದುಕೊಂಡು ಪರಾರಿಯಾಗುತ್ತಿದ್ದ ದುಷ್ಕರ್ಮಿಗಳನ್ನು ಹಿಡಿಯಲು ಬೆನ್ನಟ್ಟಿದ್ದ ಪೊಲೀಸ್ ಕಾನ್​ಸ್ಟೆಬಲ್​​ವೊಬ್ಬರು ಅದೇ ಗೂಂಡಾಗಳ ಗುಂಡೇಟಿಗೆ ಬಲಿಯಾಗಿದ್ದಾರೆ. ಪಂಜಾಬ್​ನ ಕಪುರ್ತಲಾದಲ್ಲಿ ಈ ಘಟನೆ ನಡೆದಿದ್ದು, ಕುಲದೀಪ್​ ಸಿಂಗ್​ ಬಾಜ್ವಾ ಎಂಬುವರು ಮೃತ ಪೊಲೀಸ್​.

ಭಾನುವಾರ ತಡರಾತ್ರಿ ದುಷ್ಕರ್ಮಿಗಳ ಗ್ಯಾಂಗ್​ವೊಂದು ಕಪುರ್ತಲಾದ ಪಾಗ್ವಾರಾ ಏರಿಯಾದಲ್ಲಿರುವ ಮನೆಯೊಂದರ ಬಳಿ ನಿಲ್ಲಿಸಿದ್ದ ಕಾರನ್ನು ಕದ್ದು ಪರಾರಿಯಾಗುತ್ತಿತ್ತು. ಅದೇ ಸ್ಥಳದಲ್ಲಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್​ಸ್ಟೆಬಲ್​ ಕುಲದೀಪ್​ ಸಿಂಗ್​ ಆ ದುಷ್ಕರ್ಮಿಗಳ ಬೆನ್ನಟ್ಟಿ ಹೋಗಿದ್ದಾರೆ. ಈ ವೇಳೆ ದರೋಡೆಕೋರರು ತಾವು ಪರಾರಿಯಾಗಲು ಗುಂಡು ಹಾರಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಕುಲದೀಪ್​ ಸಿಂಗ್​ ಕೂಡ ಗುಂಡಿನ ದಾಳಿ ನಡೆಸಿದ್ದು, ಮೂವರು ದುಷ್ಕರ್ಮಿಗಳು ಗಾಯಗೊಂಡಿದ್ದಾರೆ.

ಪೊಲೀಸ್ ಕಾನ್​ಸ್ಟೆಬಲ್​ ಕುಲದೀಪ್​ ಸಿಂಗ್​ ಸಾವಿಗೆ ಪಂಜಾಬ್​ ಮುಖ್ಯಮಂತ್ರಿ ಭಗವಂತ್​ ಮಾನ್​ ಸಂತಾಪ ಸೂಚಿಸಿದ್ದಾರೆ. ಹಾಗೇ, ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಮತ್ತು ಹೆಚ್ಚುವರಿ 1 ಕೋಟಿ ರೂಪಾಯಿ ಇನ್ಶೂರೆನ್ಸ್​ ಹಣ ಪಾವತಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: Punjab Minister Resigns | ಸುಲಿಗೆ ಕೇಸ್, ಪಂಜಾಬ್‌ ಸಚಿವ ಫೌಜಾ ಸಿಂಗ್‌ ಸರಾರಿ ಕೊನೆಗೂ ರಾಜೀನಾಮೆ

Exit mobile version