Site icon Vistara News

Rain News | ಕುಡಿದ ಮತ್ತಿನಲ್ಲಿ ಚರಂಡಿಯೊಳಗೆ ಬಿದ್ದ ವೃದ್ಧ

Rain News

ತಮಿಳುನಾಡು : ಕುಡಿದ ಮತ್ತಿನಲ್ಲಿ ಚರಂಡಿಯೊಳಗೆ ಬಿದ್ದ ವೃದ್ಧನನ್ನು ಸ್ಥಳೀಯರು ಸಮಯ ಪ್ರಜ್ಞೆಯಿಂದ ಬಚಾವ್‌ ಮಾಡಿದ್ದಾರೆ. ರಾಜ್ಯ ಗಡಿ ತಮಿಳುನಾಡಿನ ಹೊಸೂರಿನ ಜಿಆರ್‌ಟಿ ವೃತ್ತದ ಬಳಿ ಮಳೆಯ ಆರ್ಭಟಕ್ಕೆ (Rain News ) ಚರಂಡಿಯಲ್ಲಿ ವೃದ್ಧ ಕೊಚ್ಚಿಕೊಂಡು ಹೋಗಿದ್ದ. ಭಾರಿ ಮಳೆಯಿಂದಾಗಿ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು. ರಸ್ತೆ ಬದಿಯ ಚರಂಡಿಯನ್ನು ಮುಚ್ಚದೆ ಹಾಗೆಯೇ ಬಿಡಲಾಗಿತ್ತು. ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ನಡೆದು ಬರುತ್ತಿದ್ದ ಆತ ಚರಂಡಿ ಪಾಲಾಗಿದ್ದ.

ಆತನ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿ ರಕ್ತ ಬಂದಿತ್ತು. ಇದಕ್ಕೂ ಮೊದಲು ಆತ ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಮಾಡಿ ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡಿದ್ದ. ಕುಡಿದ ಮತ್ತಿನಲ್ಲಿ ರಸ್ತೆಯಲ್ಲಿ ಕಿರಿಕ್ ಮಾಡಿರುವುದು ತಿಳಿದು ಬಂದಿದೆ.

ಇದನ್ನೂ ಓದಿ | Rain News | ಕೊಚ್ಚಿ ಹೋದ ಟಾಟಾ ಏಸ್, ಸ್ಕೂಟಿ, ಹಲವೆಡೆ ಸಂಚಾರ ಸ್ಥಗಿತ, ಕುಸಿದ ಬೆಟ್ಟ!

ಸ್ಥಳಕ್ಕೆ ಬಂದ ಹೊಸೂರು ಪೊಲೀಸರ ಜತೆಗೂ ಆತ ಜಟಾಪಟಿ ನಡೆಸಿದ. ಆಸ್ಪತ್ರೆಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದ. ಕೊನೆಗೂ ಆತನನ್ನು ಮನವೊಲಿಸಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು.

Exit mobile version